Posts

Showing posts from December, 2015

ನಾವೇಕೆ ಹೀಗೆ?

ಮೆಟ್ಟಿದ ಮಣ್ಣು ಹೆಜ್ಜಗಳ ಹಳಿದಿಲ್ಲ ನಾವೇಕೆ ಹೀಗೆ?ತಿಳಿದಿಲ್ಲ! **** ಏಟು ತಿಂದ ಮರ ನೋವು ಎಂದಿಲ್ಲ ನಾವೇಕೆ ಹೀಗೆ?ತಿಳಿದಿಲ್ಲ! **** ಬೆಂಕಿ ತುಂಬಿದ ಭೂಮಿಯ ಎದೆಯ ಬಗೆದರೂ ಸುಟ್ಟಿಲ್ಲ ನಾವೇಕೆ ಹೀಗೆ?ತಿಳಿದಿಲ್ಲ! **** ಕಿತ್ತ ಹೂವು ಮತ್ತೇ ನಕ್ಕು ಗಂಧ ಬೀರದೆ ಇರಲಿಲ್ಲ ನಾವೇಕೆ ಹೀಗೆ?ತಿಳಿದಿಲ್ಲ! **** ಪ್ರಕೃತಿ ಗುರುವಾಗಿ ಬಂದು ಎಲ್ಲ ಕಲಿಸದೇ ಉಳಿದಿಲ್ಲ ಆದರೂ ನಾವೇನೂ ಕಲಿತಿಲ್ಲ! ---ರನ್ನ ಕಂದ

ಸಂಕಟ

ಮೋಡಕ್ಕೆ ಸಾಕಾಗಿತ್ತು, 'ಎಷ್ಟಂತ ಸುರಿಯಲಿ? ಇನ್ನೂ ಎಷ್ಟು ಜನರನ್ನು ನುಂಗಲಿ? ಸಾಕು ಮಾಡುತ್ತೇನೆ ನೋಡಲಾಗುತ್ತಿಲ್ಲ ಪಾಪದ ಜನರ ಗೋಳು' ಭುವಿಯತ್ತ ಬೇಸರದ ಕಣ್ಣಾಡಿಸಿತು ಮೋಡ ಭುವಿ 'ನನ್ನ ಮೈಯನ್ನೊಮ್ಮೆ ನೋಡು, ಪೊರೆದ ಮಡಿಲಿನ ತುಂಬ ಕೊರೆದ ಅಡಿಗಳವರೆಗೆ ಅವಶೇಷ ಕಾಪಿಟ್ಟ ಬೊಗಸೆಗೆಲ್ಲ ಕಿಚ್ಚಿಟ್ಟ ಬೊಬ್ಬೆಗಳು ನಿನ್ನ ಕಾಡಿ ಕುಡಿಗಳಿಗೆ ಕುಡಿಸಿದ ಜೀವಜಲದ ತುಂಬೆಲ್ಲ ಇವರದೇ ಹೊಲಸು ರಾಡಿ ಏನು ಫಲ ಇವರ ನಾ ಕಾಪಾಡಿ? ನೆಟ್ಟ ಹಸಿರನ್ನೆಲ್ಲ ಕಡಿದು ಬೆಟ್ಟಗಳ ಬರಿದು ಮಾಡಿ ಕೊಟ್ಟ ಪ್ರೇಮಕೆ ಬದಲು ನೋವ ಇಟ್ಟು ನಡೆಯುತಿಹರು ಅದಕ್ಕೆ ಸುರಿ, ಕೊಚ್ಚಿ ಹೋಗಲಿ ಅವರೆದೆಯ ಅಹಮ್ಮಿನ ಪರಿ, ಮುಳುಗುವುದು ಬರಿ ನಿಂತ ನೆಲವಷ್ಟೇ ಅಲ್ಲ, ಕಟ್ಟಿಕೊಂಡ ಬದುಕೂ ಎಂದು. ---ರನ್ಧ ಕಂದ

ಪಡೆಯೋಣ ತರಬೇತಿ ; ಕಲಿಯೋಣ ಸಂಸ್ಕೃತಿ

--- ಸಚಿನ್ ಕುಮಾರ ಬ.ಹಿರೇಮಠ ಒಂದು ದೇಶದ ಸಂಪನ್ಮೂಲಗಳಲ್ಲಿ ಆ ದೇಶದ ಕಲೆ ಮತ್ತು ಸಂಸ್ಕೃತಿಯೂ ಒಂದು. ನಮ್ಮ ದೇಶದಲ್ಲಿ ವಿಭಿನ್ನ ಪ್ರದೇಶಕ್ಕನುಗುಣವಾಗಿ ವಿಭಿನ್ನ ಹಾಗೂ ಅಪರೂಪವೆನಿಸುವ ಕಲೆ ಮತ್ತು ಸಂಸ್ಕೃತಿಗಳು ನಮಗೆ ಸಿಗುತ್ತವೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ನಮ್ಮ ದೇಶ ತನ್ನೆಲ್ಲ ಕಲೆ ಮತ್ತು ಸಂಸ್ಕೃತಿಗಳನ್ನು ಹೆತ್ತ ತಾಯಿಯಂತೆ ಒಂದೇ ಸಮನಾಗಿ ಕಾಣುತ್ತದೆ. ವಿಶಾಲವಾಗಿರುವ ತನ್ನೆಲ್ಲ ಪ್ರದೇಶಗಳನ್ನು, ಆ ಭಾಗದ ವಿವಿಧ ಕಲೆಗಳನ್ನು ಹಾಗೂ ಅಲ್ಲಿನ ಮನೋಜ್ಞ ಸಂಸ್ಕೃತಿಯನ್ನು ಶಿಕ್ಷಣದೊಂದಿಗೆ ಮೇಳೈಸಿ ಪರಸ್ಪರ ಪರಿಚಯಿಸಲು ಕೇಂದ್ರ ಸರ್ಕಾರದ ಸಾಂಸ್ಕೃತಿಕ ಮಂತ್ರಾಲಯದ ಅಂಗ ಸಂಸ್ಥೆಯಾಗಿ 1979ರಿಂದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ(Centre For Cultural Resource and Training) ನವದೆಹಲಿ ಎಂಬ ಸಂಸ್ಥೆ ಅಹರ್ನಿಶಿ ಶ್ರಮಿಸುತ್ತಿದೆ. ಈ ಮೂಲಕ ಶಿಕ್ಷಣದೊಂದಿಗೆ ಸಂಸ್ಕೃತಿಯನ್ನು ಬೆರೆಸಿ ಭಾರತದ ಬಗೆಗಿನ ಸಾಂಸ್ಕೃತಿಕ ವೈಭವವನ್ನು ಪ್ರಶಂಸಿಸಲು ನೆರವಾಗುತ್ತಿದೆ. ಆ ದೇಶದ ಸಂಸ್ಕೃತಿಯನ್ನು ತಿಳಿದುಕೊಂಡು ಅದನ್ನು ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಚ್ಚುಕಟ್ಟಾಗಿ ಅರಿತುಕೊಂಡಾಗ ಮಾತ್ರ ನಮ್ಮ ದೇಶದ ಸಂಸ್ಕೃತಿಯ ಸಂರಕ್ಷಣೆ ಸಾಧ್ಯ ಎಂಬುದು ಈ ಸಿಸಿಆರ್ಟಿ ಆಶಯ. ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದ ಉದ್ದೇಶಗಳು : - ಶಾಲಾ ಕಾಲೇಜು ವಿದ್ಯ...

ಕವಿತೆ

ಕಾನನದ ನಡುವೆ ಸುಳಿವ ಮೌನವೇ ಈ ಕವಿತೆ ಚಂದ್ರನ ಬಿಂಬದಿ ಸುರಿವ ಬೆಳದಿಂಗಳೇ ಈ ಕವಿತೆ ಮರುಭೂಮಿಯ ಒಳಗೆ ನೀರ ನೆಲೆಯಂತೆ ಅರಿಯದ ದ್ವೀಪದಲಿ ಸಿಕ್ಕ ಜೀವಸೆಲೆಯಂತೆ ಕಾರುಣ್ಯದಾ ಕಡಲೊಳಗೆ ಅದ್ದಿ ತೆಗೆದಿರಿಸಿ ಆತ್ಮಕ್ಕೆ ಸವರಿ ಕಾಪಿಟ್ಟ ಸವಿಗವಿತೆ ಪದಗಳಿಲ್ಲದಿದ್ದರೂ ತಾ ಭಾವಸೆಲೆಯೊಡೆದು ಒಲವ ಕಂಪ ಬೀರೋ ಹೂವು ಈ ಕವಿತೆ --- ರನ್ನ ಕಂದ