Posts

Showing posts from September, 2009

ಕುಣಿದಳಾ ಶಾಂತಲೆ.....

ಸಂಜೆ ಅವಸರದಲ್ಲಿ ಕೆಲಸ ಮುಗಿಸಿ ಆಫೀಸಿನಿಂದ ಹೊರಟ ರವೀಂದ್ರ. ಆಪ್ತ ಗೆಳತಿ ಶಾಂತಲೆಯನ್ನು ಭೇಟಿ ಮಾಡಲೆಂದು ಸೂರ್ಯಾಸ್ತದೆಡೆ ಮುಖ ಮಾಡಿ ಊರ ಪಕ್ಕದ ಗುಡ್ಡ ಒಂದರಲ್ಲಿನ ದೇವಸ್ಥಾನದೆಡೆಗೆ ನಡೆದ. ಅದು ಅವರಿಬ್ಬರ favourite ತಾಣ. ದಾರಿಯಲ್ಲಿ ಅವನ ಆಲೋಚನೆಗಳು ಒಂದೊಂದಾಗಿ ಗರಿ ಬಿಚ್ಚಿದವು. ಶಾಂತಲೆ ಈಗ ಹೇಗಿರಬಹುದು? ಮೊದಲಿನಷ್ಟೇ ಸಲುಗೆಯಿಂದಲೇ ನನ್ನನ್ನು ಮಾತನಾಡಿಸುವಳಾ? ಅವಳ ಎರಡು ವರ್ಷದ ಇಂಗ್ಲೆಂಡ್ ಜೀವನ ಅವಳಲ್ಲಿ ಏನಾದರೂ ಬದಲಾವಣೆ ತಂದಿರಬಹುದಾ? ಅವಳನ್ನು ಹೇಗೆ propose ಮಾಡಲಿ?ಒಪ್ಪುವಳಾ? ಒಪ್ಪಿದರದು ತನ್ನ ಪುಣ್ಯ, ಇಲ್ಲದಿದ್ದರೆ ಅವಳೊ0ಂದಿಗಿನ ತನ್ನ  ಸ್ನೇಹ ಬಾಂಧವ್ಯಕ್ಕೆ ಎಲ್ಲಿ ಚ್ಯುತಿ ಬರುವುದೋ! ಆದರೂ ಅವಳ ಬಗೆಗಿನ ತನ್ನ ಭಾವನೆಗಳನ್ನು ಮುಚ್ಚಿಡುವುದು ಸಾದ್ಯವಿಲ್ಲ, ಹಾಗಂತ ಹೇಳಿಕೊಳ್ಳಲು ಇದು ಸುಸಮಯವೂ ಅಲ್ಲ. ಈ ಸಂಗತಿಯು ಅವನಿಗೆ ಬಿಸಿ ತುಪ್ಪದಂತೆ ಭಾಸವಾಯಿತು.&n ಈಗ ಬೇಡ, ಸುಸಮಯ ನೋಡಿ ಹೇಳಿದರಾಯಿತು ಎಂದುಕೊಳ್ಳುತ್ತಲೇ ಪ್ರೀತಿ ಮತ್ತು ಚಿಂತೆ ತುಂಬಿದ ಭಾರವಾದ ಹೃದಯ ಹೊತ್ತು ದೇವಸ್ಥಾನದ ವ್ಯಾಪ್ತಿ ಪ್ರವೇಸಿಸಿದ. ಈತನಿಗಾಗಿ ಕಾಯುತ್ತ ಕುಳಿತಿದ್ದ ಶಾಂತಲೆ ಉಲ್ಲಾಸದಿಂದ ಹತ್ತಿರ ಬಂದು "ಏನೋ ರವಿ, ಇಷ್ಟೊಂದು ಕರಗ್ಹೋಗಿ ಬಿಟ್ಟಿದ್ದೀಯಾ? ಏನೋ ಚಿಂತೆ ಮಾಡೋ ಥರಾ ಸಪ್ಪಗಿದ್ದೀಯಾ?" ಎಂದಳು. "ಹಾಗೇನಿಲ್ಲ, ಆಫೀಸಲ್ಲಿ ಕೆಲಸ ಜಾಸ್ತಿಯಲ್ವಾ? ಹಾಗಾಗಿ ಸುಸ್ತಾಗಿದೆ ಅಷ್ಟೇ" ಎನ್ನುತ್ತಾ ತಮ್...

ಚಿಂತನ ಸೌರಭ : ದೇವರು

Image
ಮ ನುಷ್ಯನ ನಿರಂತರ ಜೀವನದಲ್ಲಿ ಕೆಲುವು ವಿಚಾರಗಳು ಮಾನಸಿಕ ಸ್ಥಿರತೆಯನ್ನು ಕದಡುತ್ತವೆ. ದೇವರು, ಧರ್ಮ,ಪರದೈವ ಇಂಥ ವಿಚಾರಗಳಲ್ಲಿ ನಮ್ಮ ವಿವೆಕವನ್ನು ಓರೆಗಲ್ಲಿಗೆ ಹಚ್ಚಬೇಕಾಗಿದೆ. ಇವೆಲ್ಲ ಸ್ಥಾವರ ಭಾವಗಳು. ಹಾಗಾದರೆ ಕಲ್ಪನೆಗಳೆನ್ನಬಹುದು. ಅಂಟಿಕೊಂಡರೆ ಆಸ್ತಿಕನೆನ್ನಬಹುದು. ಅಟ್ಟಿದರೆ ನಾಸ್ತಿಕನೆನ್ನಬಹುದು.     ದೇವರ ಅಸ್ತಿತ್ವ ಎಲ್ಲಿದೆ?ಹೇಗಿದೆ? ಅವನ ರೂಪ, ಬಣ್ಣ, ವಾಸನೆ, ವ್ಯಕ್ತಿತ್ವದ ಬಗ್ಗೆ ನಾನಾ ಚಿಂತಕರು, ದಾರ್ಶನಿಕರು ವಿವಿಧ ಸಿದ್ಧಾಂತಗಳನ್ನು ನಿರೂಪಿಸಿದ್ದಾರೆ. ಅವರವರ ಭಕುತಿಗೆ ಅವರವರ ಬಾವಕ್ಕೆ ಅವರಂತಿಹನು ಶಿವನು.             ಸಿದ್ದಯ್ಯ ಪುರಾಣಿಕರ ಪ್ರಕಾರ ದೇವರ ಅಸ್ತಿತ್ವವೆಂದರೆ ಮೂಡದ ಹೂವಿನ ಕಂಪು. ನವಿಲಿನ ಹೊಟ್ಟೆಯೊಳಗಿನ ಮೊಟ್ಟೆ. ಗರಿಗಳ ಕಣ್ಣಿನ ಬಣ್ಣ.ಬೀಜದ ಮೊಳಕೆ. ಮಗುವಿನ ಮಂದಹಾಸ.ಬಂಜೆಯ ಸ್ವಪ್ನ, ಕರೆಯದ ಹಾಲು. ಕಡೆಯದ ಬೆಣ್ಣೆಯ ಸವಿಯಂತಿರುವನು. ಅಂದರೆ ದೇವರು ಅಮೂರ್ತವಾಗಿದ್ದಾನೆ.ಮೂರ್ತನಾದರೆ ಫಲಪ್ರದ ಚೇತೋಹಾರಿಯಾದುದು.            ಸ್ವರ್ಗ ನರಕಗಳ ಕಲ್ಪನೆಯೂ ಕೂಡಾ ದೇವರ ಜೊತೆಗೆ ತಳುಕು ಹಾಕಿಕೊಂಡಿದೆ. ಸತ್ಕರ್ಮ ಸನ್ಮಾರ್ಗಕ್ಕೆ ಸ್ವರ್ಗ ಪ್ರಾಪ್ತಿಯಾದರೆ, ದುರಿತ್ಕರ್ಮಮಾಮಮಾರ್ಗಕ್ಕೆ ಹಾಕಿಕೊಂಡ ಸೋಪಾನಗಳೇ ಸ್ವರ್ಗ ಮತ್ತು ನರಕ. ನರಕದ ಭಯದಿಂದ ಸ್ವರ್ಗದ ಆಸೆಯಿಂದ ...

ಐದು ಹನಿಗತೆಗಳು : ಪರಿಣಾಮ

ಇವನು ಅಪರಾದಗಳನ್ನೆಸಗುತ್ತಿದ್ದ. ಅಲ್ಲಿ ಯಾರೋ ಶಿಕ್ಷೆಯನ್ನನುಭವಿಸುತ್ತಿದ್ದರು.

ವ್ಯರ್ಥ

ಅವಳಿಗೆಂದು ಇರುಳಲ್ಲಿ ಕಿತ್ತು ತಂದಿದ್ದ ನಕ್ಷತ್ರಗಳೆಲ್ಲಾ ಹಗಲಲ್ಲಿ ಬೂದಿ ಮುಚ್ಚಿದ ಕೆಂಡಗಳಾಗಿದ್ದವು.

ಮತ್ಸರ

ಹುಣ್ಣಿಮೆಯ ನೆಪ ಹೂಡಿ ಚಂದ್ರ ಭೂಮಿಯನ್ನು ಸಮೀಪಿಸಿದ್ದಕ್ಕೆ ಸೂರ್ಯ ಕೆಂಡವಾಗುತ್ತಲೇ ಹೋದ..

ಅವ್ವ..

ಬಡತನದ ಬೇಗುದಿಯಲ್ಲಿ ಬಸವಳಿದಿದ್ದ ಹೆಣ್ಣು ಮಗಳೊಬ್ಬಳು ಆಗ ತಾನೇ  ಎರಡು ಅವಳಿಗಳಿಗೆ ಜನ್ಮ ನೀಡಿದ್ದಳು.ಕಂದಮ್ಮಗಳನ್ನು ಮಲಗಿಸಲು ತಾನುಟ್ಟ ಸೀರೆಯನ್ನೇ ಬಿಚ್ಚಿ ಹಾಸಿ ಕಂದಮ್ಮಗಳನ್ನು ಮಲಗಿಸಿದಳು..ಮತ್ತಷ್ಟು ಜಾಗ ಸೀರೆಯಲ್ಲಿ ಉಳಿಯಿತು.ಆಗ ಆ ತಾಯಿ ದೇವರಲ್ಲಿ ಕೇಳಿಕೊಂಡಳು.."ದೇವರೇ..ಇನ್ನೊಂದು ಮಗುವನ್ನು ಕೊಡಬಾರದೇ..? ಆ ಸೀರೆಯ ಅದಷ್ಟು ಜಾಗ ಹಾಗೇ ಉಳಿಯಿತಲ್ಲ..!"

ಹೆದರಿಕೆ

ಇಬ್ಬರೂ ಮಾತನಾಡಿಕೊಳ್ಳುತ್ತಿದ್ದರು. "ನೀವಬು ಯಾರಿಗೆ ಹೆದರುತ್ತೀರಿ?" ಇವನೆಂದ, "ದೇವರಿಗೆ.." "ಯಾಕೆ..?" ಅವನ ಪ್ರಶ್ನೆ. "ಏಕೆಂದರೆ ನಾವು ಮಾಡುವ ಪ್ರತೀ ಕೆಲಸಗಳನ್ನೆಲ್ಲ ಅವನೊಬ್ಬನೇ ನೋಡುವುದು.." ಇವನುತ್ತರ.. "ಓಹೋ.ಹಾಗೋ..?" ಇವನೆಂದ,"ನೀವು ಯಾರಿಗೆ ತುಂಬಾ ಹೆದರುತ್ತೀರಿ?" "ನನ್ನ ಮನಸ್ಸಿಗೆ..ಯಾಕೆಂದರೆ ಎಂಥ ಕೆಲಸಗಳನ್ನೆಲ್ಲ ಮಾಡಬೇಕಾಗಿ ಬರುವುದೋ ಎಂದು" ಅವನೆಂದ.. ---ಸಚಿನ್ ಕುಮಾರ ಬಿ.ಹಿರೇಮಠ

ಆಳ

ಹೃದಯದೊಳಗಿಳಿದು ಬರೀ ಭಾವನೆಗಳ ಆಳ ನೋಡಬೇಡ.. ಧುಮುಕಿ ಬಿಡು ಒಮ್ಮೆಲೇ.. ತಡವಾದರೆ ಆಳ ಹೆಚ್ಚಾದೀತು.. ---ಸಚಿನ್ ಕುಮಾರ ಬಿ.ಹಿರೇಮಠ

ಸಮರ್ಥನೆ

ಹುಡುಗೀ, ನಾ ನಿನಗಾಗಿ ನಿನ್ನ ಪ್ರೀತಿಸುತ್ತಿಲ್ಲ.. ನಿನ್ನೊಳಗಿರುವ ನನಗಾಗಿ ನಾ ನಿನ್ನ ಪ್ರೀತಿಸಲೇಬೇಕಾಗಿದೆ.. ನೀನೂ ನನ್ನೊಳಗಿರುವೆ.. ನನ್ನೊಳಗಿರುವ ನಿನಗಾಗಿ ನೀನು ನನ್ನ ಪ್ರೀತಿಸಬಹುದು... ---ಸಚಿನ್ ಕುಮಾರ ಬಿ.ಹಿರೇಮಠ

ಹೈಕುಗಳು

ಕಣ್ಣಲ್ಲಿ ಕಣ್ಣು ಒಲವಿನಿಂದಲ್ಲ.. ಒಲವಿನ ಹುಡುಕಾಟದಿಂದ..    *** ರೆಪ್ಪೆ ಮೇಲೆ ರೆಪ್ಪೆ ನಿದಿರೆಯಿಂದಲ್ಲ.. ನಿನ್ನ ಅಗಲಿಕೆಯಿಂದ..     *** ಉಸಿರಲ್ಲಿ ಉಸಿರು ನಿನ್ನ ಒಲವಿಂದ.. ಅದುವೇ ಆನಂದ.. ---ಸಚಿನ್ ಕುಮಾರ ಬಿ.ಹಿರೇಮಠ

ಹರಾಜು

ಕನಸುಗಳು ಹರಾಜಿಗಿವೆ ಬೇಕಾದವರು ಕೊಂಡುಕೊಳ್ಳಬಹುದು ಒಲವಿನ, ಗೆಲುವಿನ, ನೋವಿನ,ನಲಿವಿನ, ಭೂತದ, ಭವಿಷ್ಯದ, ಕನಸುಗಳು ಹರಾಜಿಗಿವೆ.. ನಾನು ಕಳೆದುಕೊಂಡ ರಾತ್ರಿಗಳ ಮೇಲಾಣೆ.. ನನ್ನ ಕನಸುಗಳು ಹರಾಜಿಗಿವೆ.. ---ಸಚಿನ್ ಕುಮಾರ ಬಿ.ಹಿರೇಮಠ

ವೀಣೆ

ನನ್ನೆದಯ ಮೀಟು ಬರೀ ಪ್ರೇಮ ಸ್ವರಗಳೇ.. ಕೆಲವು ಹೃಸ್ವ. ಕೆಲವು ದೀರ್ಘ.. ಕೆಲವು ಕ್ಷೀಣ.. ಕೆಲವು ಮೌನ.. ---ಸಚಿನ್ ಕುಮಾರ ಬಿ.ಹಿರೇಮಠ

ಅಚಲ

ಹಗಲಲ್ಲಿ ಕನಸುಗಳೆಲ್ಲ ನಿದ್ರಸುತ್ತವೆ ಎದೆಯಲ್ಲಿ ಇರುಳಲ್ಲಿ ಏಳುತ ಮೆಲ್ಲ. ನಕ್ಷತ್ರಗಳಾಗುತ್ತವೆ ಅಲ್ಲಿ ಆದರೆ ನೀನೆಂದೂ ಬದಲಾಗುವುದಿಲ್ಲ.. ಹಗಲೆಂದರೆ ಸೂರ್ಯ.. ಇರುಳೆಂದರೆ ಚಂದ್ರ.. ---ಸಚಿನ್ ಕುಮಾರ ಬಿ.ಹಿರೇಮಠ

ಬಯಕೆ

ಕೆನ್ನೆಗೆ ಬಿಸಿಯುನ್ನುವ ಬಯಕೆ ಕಣ್ಣೀರಿಗೆ ಕೆನ್ನೆಗೆ ಜಾರುವ ಬಯಕೆ ಕನಸಿಗೆ ಕಣ್ಣೀರಲಿ ಕರಗುವ ಬಯಕೆ ಮನಸಿಗೆ ಕನಸ ಕಾಣುವ ಬಯಕೆ ನನಗೆ ಮನಸಾಗುವ ಬಯಕೆ ಮನಸೇ ನಾನಾಗುವ ಬಯಕೆ.. ---ಸಚಿನ್ ಕುಮಾರ ಬಿ.ಹಿರೇಮಠ

ಪರಿವರ್ತನೆ

ಹೃದಯವೆ ಬೇಡೆಂದು ಕೈ ಹಾಕಿ ಕೀಳ ಹೊರಟರೆ ಅದು ಹೂವಾಗತೊಡಗಿತ್ತು.. ಕೀಳದೆ ಬಿಟ್ಟಿದ್ದು ತಪ್ಪಾಯಿತೆನ್ನಿಸುತ್ತಿದೆ ಈಹ ಮೈಯೆಲ್ಲಾ ಚುಚ್ಚುತ್ತಿದೆ.. ---ಸಚಿನ್ ಕುಮಾರ ಬಿ.ಹಿರೇಮಠ

ಮರಣ

ಹಸಿದ ತುಟಿಗಳಿಗೆ ಬಿಸಿ ಮುತ್ತನ್ನೀಯುವೆ ಎಂದು ಕಣ್ಣು ಮುಚ್ಚಿದರೆ ಕೊಡವಿಕೊಂಡು ಬಿತ್ತು ಕಣ್ಣ ಹನಿ ಉಪ್ಪುಪ್ಪಾದ ಅನುಭವದಲ್ಲಿ ರೆಪ್ಪೆಗಳ ಅಪ್ಪುಗೆಯಲಿ ಸತ್ತು ಹೋಗಿತ್ತು ನಿನ್ನ ಪ್ರತಿಬಿಂಬ   ---ಸಚಿನ್ ಕುಮಾರ ಬಿ.ಹಿರೇಮಠ

ಮಳೆಬಿಲ್ಲು

ಮಳೆ ಬಿಲ್ಲಿಗೆ ಬಳಿದ ಬಣ್ಣಗಳೆಲ್ಲ ಕರಗಿ ನೀರಾದಾಗ ನೀನೂ ಇಲ್ಲವಾಗಿದ್ದೆ.. ಆಗನ್ನಿಸಿತು ನೀನೂ ಸಹ ಕ್ಷಣಿಕ,ಅಪರೂಪ ಎದೆಯ ಮಳೆಬಿಲ್ಲನ್ನೇರಿ ಕುಳಿತಾಗಲೇ ಅನ್ನಿಸಿತ್ತು, ನೀನೂ ಜಾರುವವಳೇ, ಕರಗುವವಳೇ..   ---ಸಚಿನ್ ಕುಮಾರ ಬಿ.ಹಿರೇಮಠ

ಹೂವು

ರಸ್ತೆ ಬದಿಗೆ ಅರಳಿದ ಹೂವಗಳನು ಯಾರೋ ಕಿತ್ತರು ಕೆಲವನ್ನು ನೀರೆಯರ ಮುಡಿಗೆ ಕೆಲವನ್ನು ದೇವರ ಗುಡಿಗೆ ಇಟ್ಟರು ಕೆಲವನ್ನು ಹೆಣದ ಅಡಿಗೆ ಕೆಲವನ್ನು ರಾಜ ಬೀದಿಯ ಬದಿಗೆ ಬಿಟ್ಟರು ಹಗುರವಾದರೂ ಹೂವು ಮನಸ್ಸಿನಾಳಕ್ಕಿಳಿಯುವ ಭಾರವಾದ ವಸ್ತು ---ಸಚಿನ್ ಕುಮಾರ ಬಿ.ಹಿರೇಮಠ

ಮುತ್ತು

ಗೆಳೆಯ, ನಿನ್ನ ಮುತ್ತಿಲ್ಲದೇ ತುಟಿಗಳು ಬತ್ತಿ ಹೋಗಿವೆ ಒಂದಿನಿತು ನಗೆ ಚೆಲ್ಲದೆ ಮಾತುಗಳೂ ಸತ್ತು ಹೋಗಿವೆ.. --- ಸಚಿನ್ ಕುಮಾರ ಬಿ.ಹಿರೇಮಠ