Posts

Showing posts from 2010

ಪ್ರೀತಿಯೊಂದೆ ಕಾರಣ...

ನನ್ನ ನಿನ್ನ ನಡುವಲಿ ಯಾವ ಬಗೆಯ ಸ್ನೇಹವೋ.. ಭಿನ್ನ ಭಿನ್ನ ಮನದಲಿ  ಒಂದೇ ಬಗೆಯ ಮೋಹವೋ ನೋವು ಕರಗಿ ನಲಿವು ಮಿರುಗಿ ಇರಲಿ ಒಲವ ಹೂರಣ ಸಾವಿನಾಚೆಗೂ ಜೀವವಿರುಲು ಪ್ರೀತಿಯೊಂದೆ ಕಾರಣ    ---ಸಚಿನ್ ಕುಮಾರ ಬಿ.ಹಿರೇಮಠ

ಕಾಯುತಿಹೆ ನಿನಗಾಗಿ...

ಸೂರ್ಯ ಮೋಡದ ಮರೆಯಲ್ಲಿ ಅವಿತಿದ್ದ ಇರುಳು ಮೈ ಕೊಡವಿ ಮೇಲೇಳುತ್ತಿತ್ತು ನಿನಗೆಂದೇ ತರಿಸಿದ್ದ ಚಹಾ ಹಬೆಯಾರಿ ತಣ್ಣಗಾಗಿತ್ತು ಕೆಫೆಯಲ್ಲಿದ್ದವರೆಲ್ಲ ಹೋಗಿ ಎಷ್ಟೋ ಹೊತ್ತಾಗಿತ್ತು.. ಆದರೂ ನೀ ಬರಲಿಲ್ಲ ನನಗೇನೂ ಬೇಜಾರಿಲ್ಲ... ನಿನ್ನ ದಾರಿ ಕಾಯುವುದರಲ್ಲಿ.. ನೀ ಬರುವೆ ಎಂದು ನಾ ಕಾಯುವುದು ಇನ್ನು ನಿಲ್ಲಿಸಿಲ್ಲ.. ನಿನಗಾಗಿ ದಿನ ಕಾಯುವೆ ಒಂದು ಕಪ್ ತಣ್ಣಗಾದ ಚಹಾದೊಂದಿಗೆ ಕೆಫೆಯೊಂದರಲ್ಲಿ..     ---ಮಹಾಂತೇಶ ದೊಡ್ಡಮನಿ

ಮಿಲನ

ನಸು ನಾಚಿಕೆಯೇಕೆ ಪಿಸುಮಾತಿಗೆ ಬಿಗಿದಪ್ಪಿ ಮುತ್ತಿಡಲು ಇಲ್ಲ್ಯಾರ ಹೆದರಿಕೆ? ಬೇರಾರು ಇಲ್ಲ, ಹೂ ಮಂಚವಂದನ್ನು ಬಿಟ್ಟು ದೀಪದ ಬೆಳಕಿರಲಿ ನೋಡಬೇಕು ನಿನ್ನ ಮುಖ ನಾಚಿ ಕೆಂಪೇರುವುದ.. ದೀಪವು ಸಹ ನಾಚಿಕೊಳ್ಳಲಿ ನಿನ್ನ ಕೆನ್ನೆ ಕೆಂಪಿನ ಮುಂದೆ ಬಾ ಪ್ರಿಯ ಸಖಿ ಬಿಗಿದಪ್ಪು,ತೆಕ್ಕೆಯೊಳು ಸಂಭವಿಸಲಿ ಅವ್ಯಕ್ತ ಒಲುಮೆ ನರನಾಡಿಗಳಲ್ಲಿ ಹರಿಯಲಿ ಜೀವಕಳೆ..    ---ಮಹಾಂತೇಶ ದೊಡ್ಡಮನಿ

ಒಲುಮೆಯ ಕರೆ

ಚೆಲುವೆಯ ಒಲುಮೆಯ ಕರೆಗೆ ಒಲ್ಲೆ ಎನಲಾದೀತೆ? ಪಿಸು ನುಡಿಗಳ ಬಿಸಿಯುಸಿರು ಬೇಡ ಎನಲಾದೀತೆ? ಬೇಕೆನಿಸುತಿದೆ ಅವಳ ಸಾಂಗತ್ಯ ಜೀವಮಾನದುದ್ದಕ್ಕೂ ಜೇನಸವಿಯಂತೆ     ---ಮಹಾಂತೇಶ ದೊಡ್ಡಮನಿ

ಹೊದಿಕೆ

ಚೆಲುವೆ ಮತ್ತೇ ಬಂತು ಚಳಿಗಾಲ ಮೈ ಕೊರೆವ ಚಳಿ ನನಗೆ ಅಪ್ಪಿತಪ್ಪಿಯೂ ನೆನಪಾಗುತ್ತಿಲ್ಲ ಬೆಚ್ಚಗಿನ ಹೊದಿಕೆ ಆದರೆ ಬೆಂಬಿಡದೆ ಕಾಡುತಿವೆ ನಿನ್ನಪ್ಪುಗೆಯಲಿ ಕಳೆದ ಬೆಚ್ಚನೆಯ ಗತರಾತ್ರಿಗಳ ನೆನಕೆ..    ----ಮಹಾಂತೇಶ ದೊಡ್ಡಮನಿ

ಬೇರು(ದಿ.28-09-2008ರಂದು 'ಸಂಯುಕ್ತ ಕರ್ನಾಟಕ' ದಿನಪತ್ರಿಕೆಯ 'ಸಾಪ್ತಾಹಿಕ ಸೌರಭ'ದಲ್ಲಿ ಪ್ರಕಟಗೊಂಡಿದ್ದ ಕತೆ)

Image
ನಾ ನು ಅತ್ತೆಯ ಮನೆಗೆ ಹೋದದ್ದು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ಹೋಗಿದ್ದೆನಾದರೂ ಈ ಸಲ ಹೋದುದರ ವೈಶಿಷ್ಟ್ಯವೇ ಬೇರೆ. ಈ ಸಲ ಬದುಕಿಗೆ ಒಂದು ಭದ್ರ ನೆಲೆಗಟ್ಟನ್ನು ರೂಪಿಸಿಕೊಂಡಿದ್ದೆ. ತೃಪ್ತಿ ತರುವಂಥ ಸರ್ಕಾರಿ ಕೆಲಸ, ನನ್ನ ತಂದೆ ತಾಯಿ, ಮಾವ ಅತ್ತೆ ನನ್ನ ಹರದಯ ಸನ್ನಿಧಿಯಲ್ಲಿದ್ದರು. ನಾನು ಆರಾಧಿಸುತ್ತಿದ್ದ ನನ್ನ ಪ್ರೇಮ ದೇವತೆ 'ದೀಪಾ' ಬಗೆಗಿನ ನೂರಾರು ಕನಸುಗಳು, ಏನನ್ನಾದರೂ ಸಾಧಿಸಬೇಕೆಂಬ ಅದಮ್ಯವಾಧ ಛಲ - ಹೀಗೆ ಎಲ್ಲವನ್ನು ಸಮ್ಮಿಳಿಸಿಕೊಂಡು ನನ್ನ ಅತ್ತೆಯ ಮನೆಗೆ ಹೋಗಿದ್ದೆ. ತಂಗಿಯ ಮಗ ಎಂಬ ಕಾಳಜಿಯಿಂದ ನನ್ನನ್ನು ನನ್ನ ಕಾಲ ಮೇಲೆ ನಿಲ್ಲುವಷ್ಟು ಎರವಾಗಲು ನನಗೆ ಶಕ್ತಿ ಮೀರಿ ಶಿಕ್ಷಣ ಕೊಡಿಸಿ, ತಂದೆ ಇಲ್ಲದ ಕೊರಗು ಕಾಡದಿರಲಿ ಎಂದು ನನ್ನೆಲ್ಲಾ ಬೇಡಿಕೆಗಳನ್ನು ಈಡೇರಿಸಿದ್ದರು ನನ್ನ ಮಾವ.ಬಹುಶಃ ನನ್ನ ತಾಯಿ ಕೂಡ ಕೊಡದಷ್ಟು ಪ್ರಿತಿ ಮಮತೆಯನ್ನು ನನ್ನತ್ತೆ ನೀಡಿ ಏಳೆಂಟು ವರ್ಷ ಸಲುಹಿದವಳು.   ದೀಪಾ ಮತ್ತು ನಾನು ಬಾಲ್ಯದಿಂದಲೇ ಒಂದೇ ಗೂಡಿನ ಹಕ್ಕಿಗಳು. ಒಳ್ಳೆಯ ಮಿತ್ರರು. ಸ್ನೇಹ ತುಸು ಗಟ್ಟಿಗೊಂಡು ಪ್ರೀತಿಗೆ ತಿರುಗಿದ್ದು ನಮಮ್ರಿವಿಗೆ ತಡವಾಗಿ ಬಂದಿತು.   ಸ್ವಾರ್ಥವಿರದ ಅವಳ ಮನಸ್ಸು ಶುಭ್ರವಾಗಿತ್ತು.ಸದಾ ಮುಕ್ತವಾಗಿರುತ್ತಿತ್ತು. ಅವಳನ್ನು ಪ್ರೀತಿಸುವುದರಲ್ಲಿ ತಪ್ಪಿಲ್ಲ ಎಂದೆನಿಸಿತ್ತು. ನಮ್ಮಿಬ್ಬರ ಈ ಪ್ರೀತಿಯ ವಿಷಯ ನನ್ನತ್ತೆ ಮಾವನಿಗೂ ತಿಳಿದಿತ್ತು. ಈ ಸಲದ ಭೇಟಿ ನಮ್ಮ ಈ ಪ್ರೀತ...

ಮಿಠಾಯಿ ಗಾಡಿ (22-03-2009 ರಲ್ಲಿ ವಿಜಯ ಕರ್ನಾಟಕ ದಿನಪತ್ರಕೆಯ ಪುಟಾಣಿ ವಿಜಯದಲ್ಲಿ ಪ್ರಕಟಗೊಂಡ ಮಕ್ಕಳ ಕವಿತೆ)

ಮಿಠಾಯಿ ಗಾಡಿ ಬಂದಿದೆ ಅಮ್ಮ ಬೇಗನೆ ಬಾರಮ್ಮ ಸಕ್ಕರೆ ಕಡ್ಡಿ ಕೊಳ್ಳುವೆನಮ್ಮ ಕಾಸನು ತಾರಮ್ಮ.. ಹಸಿರು ಬಣ್ಣದ ಜಾಡಿಯೊಳಗೆ ಜಿಲೇಬಿ ಪೇಡಗಳು ನೀಲಿ ಬಣ್ಣದ ಜಾಡಿಯೊಳಗೆ ಹಲವು ಬರ್ಫಿಗಳು ಬಗೆ ಬಗೆ ಬಣ್ಣದ ಸಕ್ಕರೆ ಕಡ್ಡಿ ರುಚಿ ರುಚಿ ಬಿಸ್ಕತ್ತು ಹೆಚ್ಚಿಗ ತಿಂದರ ಸೋಹನ್ ಪಪ್ಪಡಿ ತಪ್ಪದು ಆಪತ್ತು ವಿದ್ಯೆಯ ಕಲಿತು ದಏಶವ ಮಾಳ್ಪ ಸಿಪಾಯಿ ಆಗುವೆನು ಅಲ್ಲಿಯವರೆಗೆ ಸ್ವಲ್ಪೇ ಸ್ವಲ್ಪ ಮಿಠಾಯಿ ತಿನ್ನುವೆನು      ---ಸಚಿನ್ ಕುಮಾರ ಬಿ.ಹಿರೇಮಠ

ಕೆಸರಿನ ಕಮಲ...

ಪಾಪ..!ಕರ್ನಾಟಕದ ಸ್ಥಿತಿ ಹೆಂಗಾಯ್ತಲ್ಲ..?ನಿಮ್ಗೆ ಆ ಕತೆ ನೆನಪಿರಬಹುದು. ಅದೆ ಎಲ್ಡು ಬೆಕ್ಕುಗಳಿಗೆ ಒಂದು ಮಂಗ ನ್ಯಾಯ ಹೇಳಿದ್ದು. ಇಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲೇ ತೃಪ್ತ ಮತ್ತು ಅತೃಪ್ತ ಬಣಗಳ ನಡುವಿನ ಜಟಾಪಟಿಯ ನಡುವೆ ಜೆಡಿಎಸ್ ಮತ್ತು ಕೈ ಪಕ್ಸದವ್ರು ಲಾಬ ಎಣಿಸ್ತಿದಾರೆ.ಸರ್ಕಾರ ಉಳಿಯುತ್ತೋ ಬೂಳುತ್ತೋ ಗೊತ್ತಿಲ್ಲಾ..ಅಲ್ರೀ, ಮಂತ್ರಿಗಿರಿ ಸಿಗ್ಲಿಲ್ಲಾ ಅಂತಾ ಪಕ್ಸಕ್ಕೆ ಹಿಂಗ್ ದ್ರೋಹಾ ಬಗ್ಯೋದಾ? ನಮ್ ಯಡ್ಯೂರಪ್ಪಂಗೂ ಬುದ್ಧಿ ಇಲ್ಲಾ.. ಕಣ್ಣೋರ್ಸೋಕೆ ಸೆರಗೆ ಬೇಕಿತ್ತಾ? ಕರ್ಚೀಫ ನಡೀತಿರ್ಲಿಲ್ವಾ? ಮುಖ್ಯಮಂತ್ರಿಯೋರ್ರೇ.. ಏನ್ ನಡೀತಿದೆ ಇಲ್ಲಿ..? ಆಡ್ಕೊಂಡ್ ನಗೋರ್ ಮುಂದೆ ಎಡ್ವಿ ಬೀಳ್ತಿದ್ದೀರಲ್ರೀ...! ರೇಣುಕಾಚಾರ್ಯರೇ... ನಿಮ್ಗೆ ನಿಯತ್ತು ಅನ್ನೋದು ಇದೆಯಾ? ರಾಜ್ಯದ ಜನತೆಯ ಉದ್ಧಾರ ನೋಡ್ತೀರಾ ಅತ್ವಾ ಬರೀ ನಿಮ್ ಸುಖಾನೇ ನೋಡ್ತೀರಾ.. ಥೂ..!ಓಡಿ ಹೋಗಿರೋ ಸಾಸಕರೇ.. ಜನರಿಗೆ ನೀಡಿದ್ದ ಭರವಸೆಗಳನ್ನಾ ಮೊದ್ಲು ಈಡೆರ್ಸಿ.. ಆಮ್ಯಾಕೆ ಸುಡಗಾಡಿಗೆ ಹೋಗ್ರಿ.. ನಿಮ್ನಾ ಆರಿಸಿ ತಂದಿರೋ ನಮಗೆ ಬುದ್ಧಿ ಇಲ್ಲಾ.. ಕೈ ಪಕ್ಸದೋರೇ...60 ವರ್ಷ ನೀವ್ ಮಾಡಿದ ಶೂನ್ಯ ಸಂಪಾದನೆ ಜನ್ರಿಗೆ ಗೊತ್ತಿದೆ. ಒಸಿ ಅವ್ರಿಗೆ ಸುಧಾರಣೆ ಮಾಡೋಕೆ ಅವ್ಕಾಸಾ ಮಾಡಿಕೊಡಿ.. ನಿಮ್ಗೆಲ್ಲಾ ವಯಸ್ಸಾಗಿದೆ. ಒಸಿ ರೆಸ್ಟ್ ಮಾಡಿ. ಇಂತಿ ನಿಮ್ ...

ಸ್ಥಿತಿ

ಗೆಳತಿ, ನಿನ್ನ ಕಣ್ಣುಗಳಲ್ಲಿ ಕರಗಿದ್ದೇನೆ ನಿನ್ನ ಸನಿಹವಿಲ್ಲದೆ ಸೊರಗಿದ್ದೇನೆ ---ಸಚಿನ್ ಕುಮಾರ ಬಿ.ಹಿರೇಮಠ

ನಯನಗಳು

ನಿನ್ನ ಮೊಗ ಕಂಡಾಗ ಅನ್ನಿಸಿತ್ತು ಕಮಲದಲ್ಲಿ ಕಮಲದಂತೆ ವದನದಲ್ಲಿ ನಯನದ್ವಯಗಳು ---ಸಚಿನ್ ಕುಮಾರ ಬಿ.ಹಿರೇಮಠ

ಸಾಕಿನ್ನು ಸೇರಿರೈ ಮನುಜ ಮತಕೆ.....

ಸಪ್ಟೆಂಬರ್ 30,2010 ರಂದು   ಮಹತ್ತರವಾದ ಅಯೋಧ್ಯೆ ತೀರ್ಪು ಪ್ರಕಟವಾಗಲಿದೆ. ತ್ರಿ ಸದಸ್ಯ ಪೀಠ ನೀಡುವ ಶ್ರೀರಾಮ ಜನ್ಮ ಭೂಮಿ ಕುರಿತಾದ ಐತಿಹಾಸಿಕ ತೀರ್ಪು ಜನಮಾನಸವನ್ನು ಹದಗೆಡಿಸದಿರಲಿ. ತೀರ್ಪು ಏನೇ ಬರಲಿ, ಯಾರ ಪರವೆ ಬರಲಿ ಅದನ್ನು ಗೌರವದಿಂದ ಸ್ವಾಗತಿಸೋಣ. ನ್ಯಾಯ ದೇವತೆಯ ನಿರ್ಧಾರಕ್ಕೆ ಬದ್ಧರಾಗಿರೋಣ. ಕುವೆಂಪುರವರು  ಹೇಳಿದಂತೆ ನಾನು ಹಿಂದು, ನಾನು ಮುಸ್ಲಿಂ ಅಂತೆಲ್ಲಾ ಭೇದ ತೋರದೆ ಒಂದಾಗೋಣ. ಅಂದಹಾಗೆ ಶಾಂತಿ ಪ್ರಿಯರಾದ ನಾವು ಧರ್ಮಕ್ಕೆ ನಿಜವಾದ ವ್ಯಾಖ್ಯಾನ ನೀಡೋಣ. ರಾಮರೂ ನಾವೇ, ರಹೀಮರೂ ನಾವೇ..ಮೇಲಾಗಿ ನಾವು ಭಾರತೀಯರೆಂಬುದನ್ನು ಮರೆಯದಿರೋಣ..                                                                          --ಸಚಿನ್ ಕುಮಾರ ಬಿ.ಹಿರೇಮಠ , ಜೇವರ್ಗಿ         

ಜತೆಯಾದರೆ ನೀವು....

ಹಾಯ್ ಗೆಳೆಯರೆ,   ನಿಮ್ಮ ಒಳಗಿನ ಲೇಖಕ ಲೇಖಕಿಯನ್ನು ಬರೆಯಲು ಕೂಡಿಸಿ. ನಿಮ್ಮ ಬರಹಗಳನ್ನು ನನ್ನ ಿಮೇಲ್ ವಿಳಾಸಕ್ಕೆ ಕಳುಹಿಸಿ. ನನ್ನೊಂದಿಗೆ ಸಾಥ್ ನೀಡಿ.ಸದ್ಯ ಮುಧೋಳದ ನನ್ನ ತಮ್ಮ ನವೀನ್ ಕುಮಾರ ಬಿ.ಹಿರೇಮಠ, ಗೆಳತಿ ರಾಜೆಶ್ವರಿ ಬಿ.ಕೆ ಹಾಗೂ ಗೆಳೆಯ ಸಂಗಮೇಶ ಯಾಳವಾರ ಈ ಸಲ ನಿಮ್ಮ ಮುಂದಿದ್ದಾರೆ..                                  -ಸಚಿನ್ ಕುಮಾರ ಬಿ.ಹಿರೇಮಠ,                                   sachin_b1985@yahoo.co.in

ಜಗನಯನ

ನಾ ನಿನ್ನ ಪ್ರೀತಿಸುವಾಗ ನಿನ್ನ ಕಣ್ಣುಗಳಲ್ಲಿ ಜಗವ ಕಂಡೆ ನೀ ನನ್ನಿಂದ ದೂರಾದಾಗ ಜಗದೊಳಗೆ ನಿನ್ನ ಕಣ್ಣುಗಳ ಕಂಡೆ    ---ಸಂಗಮೇಶ ಯಾಳವಾರ, ಬಿಜಾಪುರ

ಕಂಬನಿ

ನನ್ನ ಕಂಬನಿಯಲಿ ನಿನ್ನದೇ ಬಿಂಬ ಕಂಡು ಕುಷಿಯಾಗುತ್ತೇನೆ. ನನ್ನ ಹೊರತು ನಿನ್ನ ಯಾರೂ ನೋಡದಿರಲೆಂದು ನಾನೇ ಕೊಡವಿಕೊಳ್ಳುತ್ತೇನೆ.     ---ರಾಜೇಶ್ವರಿ ಬಿ.ಕೆ, ಜವಳಗಾ

ಬತ್ತಿಲ್ಲ....

ಗೆಳತಿ, ನನ್ನ ಈ ತೂತು ಬಿದ್ದ ಹೃದಯದೊಳಗೆ ಒಮ್ಮೆ ಇಣುಕಿ ನೋಡು ಬತ್ತಿಲ್ಲ ನನ್ನಲ್ಲಿ ಪ್ರೀತಿಯ ಹನಿಗಳು ಇನ್ನೂ ತೊಟ್ಟಿಕ್ಕುತ್ತಿವೆ ನೋಡು...    ---ನವೀನ್ ಕುಮಾರ ಬಿ.ಹಿರೇಮಠ, ಮುಧೋಳ

ಬದುಕು ಬದುಕಾಗಬೇಕಾದರೆ...

ಅದೊಂದು ಸುಡು ಬಿಸಿಲಿನ ಮಧ್ಯಾಹ್ನ. ಎತ್ತ ನೋಡಿದರತ್ತ ಭಣಗುಡುವ ಬಿಸಿಲು. ಬೆಂಕಿಯಂತೆ ಕಾದಿತ್ತು ಭೂಮಿ. ಇಂಥ ವಿಷಣ್ಣ ಸ್ಥಿತಿಯಲ್ಲಿ ದಾರಿಹೋಕನೊಬ್ಬ ತುಂಬಾ ದಣಿದು ಆ ದಾರಿಯುದ್ದಕ್ಕೂ ನಡೆದು ಬರುತ್ತಿದ್ದ. ತುಸು ದೂರ ನಡೆದ ಬಳಿಕ ಅವನಿಗೆ ಒಂದು ತೋಪು ಕಂಡಿತು. ಅದರಲ್ಲಿ ಮಾವು ಬೇವು,ಆಲದಂತಹ ಮರಗಳೂ, ಟೊಮೊಟೊ, ಈರುಳ್ಳಿ, ಕುಂಬಲ, ಸೌತೆಯಂತಹ ಗಿಡಬಳ್ಳಿಗಳೂ ಕಂಡವು. ಜತೆಗೆ ಅಲ್ಲೊಂದು ನೀರಿನ ಒರತೆ.ದಾರಿ ಹೋಕನಿಗೆ ಅದು ಒಂದರ್ಥದಲ್ಲಿ ಸ್ವರ್ಗವೇನೋ ಎಂಬಂತೆ ತೋರಿತು. ಹೊಟ್ಟೆ ಬೇರೆ ಹಸಿದಿತ್ತು. ಹೀಗಾಗಿ ತಾನು ತಂದಿದ್ದ ಬುತ್ತಿ ಸಮೇತ ತೋಪಿನೊಳಗೆ ಸೇರಿಬಿಟ್ಟ ಆ ದಾರಿಹೋಕ. ಹೊಟ್ಟೆ ತುಂಬಿಸಿಕೊಂಡು ಅಲ್ಲಿದ್ದ ಬೇವಿನ ಮರದ ಕೆಳಗೆ ವಿಶ್ರಮಿಸಿದ.ಅಲ್ಲಿದ್ದ ಮರಗಿಡಬಳ್ಳಿಗಳನ್ನೊಮ್ಮೆ ಎಗ್ಗಿಲ್ಲದಂತೆ ದಿಟ್ಟಿಸಿದ.ಆ ಸೃಷ್ಟಿಯಲ್ಲಿ ಏನೋ ಪ್ರಮಾದವಿರುವಂತೆ ಕಂಡಿತು ಆ ದಾರಿಹೋಕನಿಗೆ. "ಎಲ್ಲ ದೊಡ್ಡ ದೊಡ್ಡ ಮರಗಳಲ್ಲಿ ಚಿಕ್ಕ ಚಿಕ್ಕ ಕಾಯಿಗಳಿವೆ. ಬಲವಿಲ್ಲದ  ಬಳ್ಳಿಗಳಲ್ಲಿ ಭಾರದ ಕಾಯಿಗಳಿವೆ. ಇದೆಂಥ ಅಸಮಾನತೆ? ಹೀಗೆ ವೈರುಧ್ಯದಿಂದ ನಿಸರ್ಗವನ್ನು ಸೃಷ್ಟಿಸಿದ ಆ ದೇವರಿಗೆ ನನ್ನ ಧಿಕ್ಕಾರವಿದೆ. ಅವುಗಳ ಆಕಾರಕ್ಕೆ ತಕ್ಕಂತೆ ಕಾಯಿಗಳನ್ನು ಸೃಷ್ಟಿಸಬಹುದಿತ್ತಲ್ಲ ಆ ದೇವರು.? ನಿಜಕ್ಕೂ ಆ ದೇವರು ಮಹಾ ಮೂರ್ಖ..!" ಅಂತ ಸ್ವಗತ ಗೈದು ತುಸು ಹೊತ್ತು ನಿದ್ರಿಸಲನುವಾದ.ಿದೆ ವೇಳೆ ಬೆವಿನ ಮರದಿಂದ ಬೇವಿನ ಕಾಯಿಯೊಂದು ದಾ...

ಕಾರಣ

ಲೆಕ್ಕವಿಲ್ಲದಷ್ಟು ಕನಸುಗಳು ಒಂದೂ ನನಸಾಗಲಿಲ್ಲ.. ಅದಕ್ಕೆಂದೆ ನಿನ್ನ ಪ್ರೀತಿಸುವ ಮನಸ್ಸಾಗಲಿಲ್ಲ..    ---ಸಚಿನ್ ಕುಮಾರ ಬಿ.ಹಿರೇಮಠ

ತಪ್ಪು

ಗೆಳೆಯ, ಶೀಲದ ಬೇಲಿಯೊಳಗೆ ನಿನ್ನ ನಾ ಬಿಟ್ಟುಕೊಂಡೆ ನಿನ್ನ ಹುಚ್ಚು ಕಾಮದೊಳಗೆ ನನ್ನ ನಾ ಸುಟ್ಟುಕೊಂಡೆ     ---ಸಚಿನ್ ಕುಮಾರ ಬಿ.ಹಿರೇಮಠ

ಅವಧಿ

ನಿನ್ನ ಕಣ್ಣುಗಳಲ್ಲೇನು ಹೊಳಪು ಇರುಳ ತಾರೆಗಳ ತೆರದಿ ಎದೆಯ ಒಳಗೆಲ್ಲಾ ನೆನಪು ಸಾಲು ಸಾಲುಗಳ ಸರದಿ ಎಂದು ಮುಗಿವುದೋ ಈ ಮಧುರ ವಿರಹದ ಅವಧಿ...?     ---ಸಚಿನ್ ಕುಮಾರ ಬಿ.ಹಿರೇಮಠ

ನಂದಾದೀಪ

ಎದೆಯ ನಂದಾದೀಪದಂತೆ ಪ್ರೀತಿ ಮನಸುಗಳೇ ಬತ್ತಿ ಭಾವನೆಗಳೇ ತೈಲ ಸ್ನೇಹ ನಂಬಿಕೆಗಳೇ ಇದಕೆ ನಿತ್ಯ ನೇಮ ಬದುಕೇ ಹೊಮ್ಮುವ ಬೆಳಕು ಪ್ರೀತಿಯೊಂದೆ ಎಲ್ಲದಕ್ಕೂ     ---ಸಚಿನ್ ಕುಮಾರ ಬಿ.ಹಿರೇಮಠ

ಗರ್ಭಿಣಿ

ನಿನ್ನ ನೆನಪುಗಳನೇ ಹೊತ್ತ ನನ್ನ ಮನಸು ಚಿರ ಗರ್ಭಿಣಿ     ---ಸಚಿನ್ ಕುಮಾರ ಬಿ.ಹಿರೇಮಠ

ಮಿಡಿತ

ನನ್ನ ಸಮಾಧಿಗೆ ಕಿವಿಯೊತ್ತು ಅಲ್ಲೊಂದು ಹೃದಯ ಇನ್ನೂ ಮಿಡಿಯುತ್ತಿರುತ್ತದೆ ಏಕೆಂದರೆ ನನ್ನ ಪ್ರೀತಿಗೆ ಸಾವಿಲ್ಲ..      ---ಸಚಿನ್ ಕುಮಾರ ಬಿ.ಹಿರೇಮಠ

ಸೂರ್ಯಕಾಂತಿ

ನಿನ್ನ ಒಲವಿಗಾಗಿ ಕಾಯುವ ನನ್ನ ಪ್ರೀತಿ ಸಾವಿಲ್ಲದ ಸೂರ್ಯಕಾಂತಿ    ---ಸಚಿನ್ ಕುಮಾರ ಬಿ.ಹಿರೇಮಠ

ಬಾರೋ ದುಂಬಿ

ಹೃದಯ ಹೂವಿನ ಮಡಿಲಲಿ ನಿನ್ನ ಒಲವಿನ ಪರಿಮಳ ಬಗೆಬಗೆಯ ಕನಸು ಕಣ್ಣಲಿ ಕವಿತೆ ಬರೆಯೋ ಹಂಬಲ ಬಾರೋ ದುಂಬಿ ನನ್ನ ನಂಬಿ ಏಕೆ ನಿನ್ನಲಿ ತಳಮಳ?      ---ಸಚಿನ್ ಕುಮಾರ ಬಿ.ಹಿರೇಮಠ

ನೆನೆನೆನೆದು....

ನೀ ನಡೆವ ಹಾದಿಯಲ್ಲಿ ಮುಳ್ಳಿಲ್ಲ ಕಲ್ಲಿಲ್ಲ ನನ್ನುಸಿರು ತುಂಬಿದ ಬಸಿರು ಕನಸಿನ ಹೂ ರಾಶಿಯಿದೆ.. ಮೆಲ್ಲನೇ ನಡೆದು ಬಾ ಈ ನಲ್ಲನ ನೆನೆನೆನೆದು...    ---ಸಚಿನ್ ಕುಮಾರ ಬಿ.ಹಿರೇಮಠ

ಬದಲಿಸು...

ಗೆಳತಿ, ಯಾಕೆ ನನ್ನ ನಿನ್ನಲಿ ವಿರಹ? ಬದಲಿಸು ಹಣೆ ಬರಹ ಹಗಲು ರಾತ್ರಿಯ ಥರಹ..     ---ಸಚಿನ್ ಕುಮಾರ ಬಿ.ಹಿರೇಮಠ

ಅರಿಯೆ

ಹಗುರಾಗಿ ಮುಚ್ಚಲು ಕಣ್ಣ ನಗುವಾಗಿ ಕಾಡುವೆ ನನ್ನ ಎದುರಲ್ಲಿ ಬಂದರೆ ಚಿನ್ನ ಎದೆಯಲ್ಲಿ ಒಲವಿನ ಬಣ್ಣ ಇದ ಏನೆಂದು ನಾನರಿಯೆ ಕನಸಲಿ ಕಾಡುವುದು ಸರಿಯೇ?      ---ಸಚಿನ್ ಕುಮಾರ ಬಿ.ಹಿರೇಮಠ

ಅರುಹು

ಎದೆಯ ಮುಗಿಲನು ಬರಿದು ಮಾಡಿ ಕರಗೊ ಚಂದಿರ ಬೇಡ ಗೆಳತಿ ಸುಧೆಯ ತಿನಿಸನು ಕರೆದು ನೀಡಿ ಮಿರುಗೋ ಮನಸಿನ ಮಧುರ ಪ್ರೀತಿ ಬೇಕು ಸವಿಯು ಅದುವೇ ಸುಂದರ ಸಾಕು ವಿರಹದ ಅಂತರ      ---ಸಚಿನ್ ಕುಮಾರ ಬಿ.ಹಿರೇಮಠ

ಮಾಯೆ

ಕಣ್ಣ ಕಪ್ಪು ಕಾಡಿಗೆ ನನ್ನ ಸೆಳೆದು ದೂಡಿದೆ ಗೊತ್ತೇ ಆಗದಂತೆ ನಿನ್ನ ಪ್ರೀತಿ ಗೂಡಿಗೆ ಚಿನ್ನ ನಿನ್ನ ಮಾತಿಗೆ ಇಲ್ಲ ಯಾವ ವಂತಿಗೆ  ಸತ್ತು ಬದುಕೊ ಮಾಯೆ ಕಂಡೆ ಪ್ರೀತಿಯೊಂದಿಗೆ     ---ಸಚಿನ್ ಕುಮಾರ ಬಿ.ಹಿರೇಮಠ

ಪಶ್ಚಾತಾಪ

ನಿನ್ನ ಒಲವನ್ನು ಹೂವು ಅಂದುಕೊಂಡಿದ್ದೆ ಅದು ಸೂಸುವ ಪರಿಮಳವನ್ನು ಬದುಕು ಅಂದುಕೊಂಡಿದ್ದೆ ಹಗಲು ಕಳೆದು ಇರುಳು ಬರಲು ಬಾಡಿತೇಕೆ ಹೂವು? ತುಂಬಿ ನನ್ನಲ್ಲಿ ಸಹಿಸಲಾರದ ನೋವು...    ---ಸಚಿನ್ ಕುಮಾರ ಬಿ.ಹಿರೇಮಠ

ಒಲುಮೆ

ನಿನ್ನ ನಗುವಿನೊಳಗೇನು ಅಷ್ಟು ಶಕ್ತಿ? ಅವಿತಂತೆ ಭಕ್ತನಲಿ ದೇವರ ಭಕ್ತಿ.. ಬೆಳದಿಂಗಳಾಗುತಿದೆ ತಾ ಸುಡುವ ಬಿಸಿಲು ಭೋರ್ಗೆರೆದು ಹರಿಯುತಿದೆ ಈ ಪ್ರೇಮದಾ ಹೊನಲು    ---ಸಚಿನ್ ಕುಮಾರ ಬಿ.ಹಿರೇಮಠ

ಆಹ್ವಾನ

ಗೆಳತಿ, ನನ್ನದೆಯ ಒಳಗೆ ಜಾರಿ ಬೀಳದೆ ಮೆಲ್ಲನೇ ನಡೆದು ಬಾ    ---ಸಚಿನ್ ಕುಮಾರ ಬಿ.ಹಿರೇಮಠ

ವಂಚನೆ

ಕೆನ್ನೆಗೆ ಮುತ್ತಿಡುವ ನೆಪದಲ್ಲಿ ಕಣ್ಣೀರ ಸೇರಿಕೊಂಡು ಜಾರಿ ಹೋದ ನೀನು ನಿಜಕ್ಕೂ ನಯ ವಂಚಕಿ      ---ಸಚಿನ್ ಕುಮಾರ ಬಿ.ಹಿರೇಮಠ

ಪ್ರಸವ..

ಅವನಿಯ ತುಂಬು ಯೌವ್ವನಕ್ಕೆ ಸೋತ ತರಣಿಯು ಉಷೆಯಿಂದ ಅಪ್ಪಿ ಮುದ್ದಿಸಿದುದಕೆ ಪಚ್ಚೆ ಪೈರಿನ ಭ್ರೂಣವದು ನಾಟಿ ವಸಂತವನು ಪ್ರಸವಿಸಿ ಮತ್ತೊಂದು ಮಿಲನಕೆ ಕಾಯುತಲಿದೆ ಅದೇ ಅವನಿ...      ---ಸಚಿನ್ ಕುಮಾರ ಬಿ.ಹಿರೇಮಠ

ಪ್ರೀತಿ

ಪ್ರೀತಿ ಎಂಬ ಎರಡಕ್ಷರದಲ್ಲಿ ಒಂದಕ್ಷರ ನೀನು ಇನ್ನೊಂದು ನಾನು ಬೇರಾದೆಡೆ ನಾವಿನ್ನು ಪ್ರೀತಿಗೆ ಅರ್ಥವುಂಟೇನು?     ---ಸಚಿನ್ ಕುಮಾರ ಬಿ.ಹಿರೇಮಠ

ಸ್ನೇಹ..

ಕೆನ್ನೆಯ ಜೊತೆಗೆ ಕಂಬನಿ ಸ್ನೇಹ ನೋವಿರುವವರೆಗೆ ನಿನ್ನಯ ಜೊತೆಗೆ ನನ್ನ ಸ್ನೇಹ ಬದುಕಿರುವವರೆಗೆ   ---ಸಚಿನ್ ಕುಮಾರ ಬಿ.ಹಿರೇಮಠ

ಕನಸುಗಳು..

ಈ ಕನಸುಗಳೇ ಹೀಗೆ ಇರುಳ ತುಂಬೆಲ್ಲ ಹೊಳಹೊಳೆದು ಆಸೆಗಳ ಬೆಳೆ ಬೆಳೆದು ಮನದ ಮುಗಿಲಲ್ಲಿ ಚುಕ್ಕಿ ಚಂದ್ರಮರಂತೆ ಚಿತ್ತಾರ ಮೂಡಿಸಿ ಅವಸಾನಗೊಳ್ಳುವ ಮಧುರ ಚಿತ್ರಿಕೆಗಳು       ---ಸಚಿನ್ ಕುಮಾರ ಬಿ.ಹಿರೇಮಠ

ಪರಿಶುದ್ಧಿ

ನಮ್ಮೊಳಗೆ 'ನಾನು'  ತುಂಬಿರುವ ಸುದ್ದಿ ಅರಿವಾದೊಡೆ ಬಿಡಬೇಕು ಆ ದುಷ್ಟ ಬುದ್ಧಿ ಜಗದ ಸುಖದೊಳಗೆ ಮನಸನ್ನು ಅದ್ದಿ ಮಾಡಿ ಬಿಡಬೇಕು ಭಾವ ಪರಿಶುದ್ಧಿ   ---ಸಚಿನ್ ಕುಮಾರ ಬಿ.ಹಿರೇಮಠ

ಒಂದು ಸುನೀತ..

ನನ್ನ ನೆನಪು ಅವಳಲ್ಲಿ ಶವವಾಗಿ ಕೊಳೆಯುತ್ತಿದೆ ಅವಳ ಪ್ರತಿ ನೆನಪು ನನ್ನಲ್ಲಿ ಸಸಿಯಾಗಿ ಮೊಳೆಯುತಿದೆ ತೈಲವಿಲ್ಲದ ದೀಪ ಉರಿಯುವುದಾದರೂ ಹೇಗೆ? ಅವಳಿಲ್ಲದ ನನ್ನ ನಾನು ಅರಿಯುವುದಾದರೂ ಹೇಗೆ? ಪುಟ್ಟ ಪೋರಿ ಕಟ್ಟಿಕೊಂಡ ಕಾಲ್ಚೈನು ಕುಣಿವಾಗ ಬಿಚ್ಚಿಕೊಂಡಂತೆ ನನ್ನನ್ನವಳು ಕಳಚಿಕೊಂಡಳೇ ತನಗರಿವಿಲ್ಲದಂತೆ? ಅರವತ್ತು ವೋಲ್ಟಿನ ಬಲ್ಬಿನ ಮುಂದೆ ಹಿಡಿ ಬುಡ್ಡಿ ದೀಪ ಸಾಲದಾಯಿತೇ ಯಾರದೋ ಉಳ್ಳವನ ಮುಂದೆ ನನ್ನ ಈ ರೂಪ? ಒಲ್ಲದ ಗಂಡಸರ ತಣಿಸೋ ಸೂಳೆಯರ ಸುಳ್ಳು ಸುಖ ಅಂತೆಯೇ ಅನ್ನಿಸಿರಬೇಕು ಅವಳಗೆ ನನ್ನೊಂದಿಗಿನ ದುಃಖ ಅವಳ ಮನ ಮುಗಿಲು ಮಸುಕಾದ ಮುಸ್ಸಂಜೆ ಚಿತ್ರ ನನ್ನ ನೆನಪಿನ ಶವದ ಮೈಯಿಂದ ಒಸರುವುದು ಕೀವು ಮಾತ್ರ ಅವಳ ಉತ್ಸಾಹದ ನಾಲಗೆ ಹೊಸದೇನನ್ನೋ ನೆಕ್ಕುತಿದೆ ನನ್ನ ಮನಸ್ಸು ಅವಳಿಲ್ಲದೇ ಹಗಲಿರುಳು ಬಿಕ್ಕುತಿದೆ..              ---ಸಚಿನ್ ಕುಮಾರ ಬಿ.ಹಿರೇಮಠ

ಅಹಂಕಾರದೊಂದಿಗೆ ಪ್ರೀತಿ ಸೇರಿಕೊಂಡಾಗ...(ಮಾನಸ ದಲ್ಲಿ ಪ್ರಕಟಗೊಂಡ ಲೇಖನ)

Image
ಅ ದೊಂದು ಸುಂದರವಾದ ದ್ವೀಪ. ಅದು ನೋಡಲಿಕ್ಕೆ ತುಂಬಾ ಚಿಕ್ಕದೇ. ಆದರೆ ಅದರ ಮನಸ್ಸು ವಿಶಾಲವಾದದ್ದು. ಅಲ್ಲಿ ಏನಿತ್ತು? ಏನಿಲ್ಲ ಎಂದೆಲ್ಲ. ಎಲ್ಲವೂ ಇತ್ತು. ಆದ್ದರಿಂದಲೇ ಆ ದ್ವೀಪ ಸಮೃದ್ಧವಾಗಿತ್ತು. ಅಲ್ಲಿ ಒಂದಿಷ್ಟು ಭಾವನೆಗಳು ನೆಲೆಸಿದ್ದವು. ಅದೂ ಅವೆಲ್ಲವೂ ಸುಮಧುರವಾದ ಭಾವನೆಗಳು. ಪ್ರೀತಿ, ಪ್ರೇಮ, ವಾತ್ಸಲ್ಯ, ಮಮತೆ, ಕರುಣೆ, ಸಹಾನುಭೂತಿ, ಸ್ನೇಹ, ಅಹಂಕಾರ..ಹೀಗೆ ಅನೇಕ ಭಾವನೆಗಳು ಆ ದ್ವೀಪದಲ್ಲಿ ಬದುಕುತ್ತಿದ್ದವು. ಎಲ್ಲಾ ಭಾವನೆಗಳಿಗೂ ಅವುಗಳದ್ದೇ ಬದುಕು. ಅವುಗಳದ್ದೇ ಖದರ್ರು.ಕೆಲವು ಭಾವನೆಗಳು ಬೇರೆ ಭಾವನೆಗಳೊಂದಿಗೆ ಹೊಂದಿಕೊಂಡು ಹೋಗುತ್ತಿದ್ದರೆ, ಇನ್ನು ಕೆಲವು ಭಾವನೆಗಳು ಸುತಾರಾಂ ಇದಕ್ಕೆ ಒಪ್ಪುತ್ತಿರಲಿಲ್ಲ. ಅವುಗಳಿಗೆ ಅವುಗಳದ್ದೇ ಹೆಚ್ಚು ಎನ್ನುವಂತ್ತಿತ್ತು.           ಈ ಎಲ್ಲಾ ಭಾವನೆಗಳೀಗೆ ನಾಯಕನಂತಿತ್ತು ಪ್ರೀತಿ. ಉಳಿದೆಲ್ಲ ಭಾವನೆಗಳಿಗೆ ಪ್ರೀತಿ ಎಂದರೆ ಎಲ್ಲಿಲ್ಲದ ಪ್ರೀತಿ. ಆದ್ದರಿಂದಲೇ ಅಲ್ಲಿ ವೈಮನಸ್ಸು ಎನ್ನುವುದು ಅಷ್ಟಾಗಿ ಇರಲಿಲ್ಲ. ಅದೊಂದು ಕರಾಳ ದಿನ. ದ್ವೀಪ ಆವರಿಸಿಕೊಂಡಿದ್ದ ನದಿಯಲ್ಲಿ ಪ್ರವಾಹ ಉಂಟಾಯಿತು. ನೀರು ಕ್ಷಣ ಕ್ಷಣಕ್ಕೂ ಹೆಚ್ಚಾಗಲಾರಂಭಿಸಿತು. ಅಲೆಗಳು ದ್ವೀಪದ ನೆಲವನ್ನು ಆವರಿಸಿಕೊಳ್ಳಲಾರಂಭಿಸಿದವು. ದ್ವೀಪ ಹಂತ ಹಂತವಾಗಿ ಮುಳುಗತೊಡಗಿತು. ಎಲ್ಲವೂ ಮುಗಿದೇ ಹೋಯಿತು ಎಂದು ಎಲ್ಲರೂ ಅಂದುಕೊಂಡರೆ ಪ್ರೀತಿ ಮಾತ್ರ ಧೃತಿಗ...

ಮುಗಿಯುತು ಸಿಂಹ ಗರ್ಜನೆ.........!

Image
ಮುಂ ಜಾನೆ ಎಷ್ಟು ಕ್ರೂರವಾಗಿರುತ್ತವೆ ಎಂಬುದಕ್ಕೆ ಇಂದಿನ ದಿನವಾದ 30-12-2009 ಸಜೀವ ಸಾಕ್ಷಿ. ಕನ್ನಡ ಚಿತ್ರರಂಗವಷ್ಟೇ ಅಲ್ಲ, ಇಡೀ ಕರ್ನಾಟಕವೇ ಕಂಬನಿ ಮಿಡಿಯುವ ಅತ್ಯಂತ ಕರಾಳವಾದ ದಿನ. ಸಾಹಸಸಿಂಹ ಡಾ.ವಿಷ್ಣುವರ್ಧನ ನಮ್ಮಿಂದ ದೂರಾದ ಕೆಟ್ಟ ಘಳಿಗೆ.   ಬೆಳಗಿನ ಜಾವವೇ ಸುದ್ದಿವಾಹಿನಿಗಳು ಸುದ್ದಿ ಬಿತ್ತರಿಸಿದವಾದರೂ ಕನ್ನಡಿಗರ್ಯಾರೂ ಆ ಸುದ್ದಿಗಳನ್ನ ತಮ್ಮ ಮಟ್ಟಿಗೆ ನಂಬದೇ ಹೋಗಿದ್ದರು. ಏಕೆಂದರೆ ನಿನ್ನೆಯಷ್ಡೇ ಗಾನ ಚೆತನ ಸಿ.ಅಶ್ವಥ್ ಗಾನಲೀನವಾಗಿದ್ದರು. ಕನ್ನಡಾಂಬೆ ಇಂಥ ಅನ್ಯಾಯವನ್ನು ತನ್ನ ಮಕ್ಕಳೊಂದಿಗೆ ಮಾಡಲಾರಳು ಎಂಬುದನ್ನು ನಂಬಲು ಸಾಧ್ಯವಿರಲಿಲ್ಲ. ಆದರೆ ಸತ್ಯ ಮಾತ್ರ ಕಹಿ..ನಿಜ..ಡಾ.ವಿಷ್ಣು ನಮ್ಮೊಡನೆ ಇನ್ನಿಲ್ಲ...            ಪ್ರೀತಿ ತುಂಬಿದ ಕಣ್ಣುಗಳು. ಕಂಚಿನ ಕಂಟದ ಮುದ್ದು ಧ್ವನಿ, ಆ ವಿಭಿನ್ನ ಶೈಲಿ, ಸರಳ ವ್ಯಕ್ತಿತ್ವ, ಸಹಾಯ ಮನೋಭಾವ ಇಲ್ಲವನ್ನೂ ದೇವರಂತೆ ಮೈಗೂಡಿಸಿಕೊಂಡಿದ್ದ ಡಾ.ವಿಷ್ಣು ಕನ್ನಡಿಗರ ಹೃದಯದಲ್ಲಿ ಆರಾಧ್ಯ ದೈವರಂತೆ ಎದ್ದು ನಿಲ್ಲುತ್ತಾರೆ.ಸದಾ ಕನ್ನಡತನವನ್ನ, ಪಾತ್ರ ತನ್ಮಯತೆಯನ್ನ ಹಾಗೂ ಅಪಾರ ಪ್ರೀತಿಯನ್ನೆ ತೋರುತ್ತಿದ್ದ ವಿಷ್ಣು, ಚಿತ್ರಲೋಕದ ಅದಮ್ಯ ತಾರೆ.      ಹೆಚ್.ಎಲ್.ನಾರಾಯಣ್ ರಾವ್ ಮತ್ತು ಕಾಮಾಕ್ಷಮ್ಮ ನವರ ಮಗನಾಗಿ ಮೈಸೂರಿನ ಚಾಂಮುಂಡಿಪುರಂ ನಲ್ಲಿ ಜನಿಸಿದ ಈ ಕಲಾವಿದ ಮೈ...