Posts

Showing posts from October, 2015

ನಿಂಮ ಧರ್ಮ ಆಚರಿಸಿ; ಅನ್ಯ ಧರ್ಮ ಗೌರವಿಸಿ

ನಮಗೆ ವಾಕ್ ಸ್ವಾತಂತ್ರ್ಯ ಇದೆ. ಆದರೆ ಸ್ವೇಚ್ಛಾಚಾರವಿಲ್ಲ. ಅದೂ ಧರ್ಮಗಳ ವಿಷಯದಲ್ಲಿ ಇದು ಸಲ್ಲ.ಒಂದು ಧರ್ಮದ ಬಗ್ಗೆ ಪರ-ವಿರೋಧ ಸಹಜ.ವಿರೋಧಿಸುವವರು ತಂಮ ಪಾಡಿಗೆ ತಮಗಿಷ್ಟವಾದ ರೀತಿ ಆ ಧರ್ಮವನ್ನು ಪಾಲಿಸಬೇಕು. ಅನ್ಯ ಧರ್ಮಗಳನ್ನು ಗೌರವಿಸಬೇಕು. ಹಿಂದೂ ಧರ್ಮದಲ್ಲಿನ ಕೆಲವು ಆಚರಣೆಗಳು ಮೇಲ್ವರ್ಗದವರಿಗಿದ್ದುದರಿಂದಲೇ ಬೇರೆ ಧರ್ಮಗಳುದಿಸಿದವೆಂದು ಇತಿಹಾಸ ಹೇಳುತ್ತದೆ. ಆದರೆ ಇಂದು ಎಲ್ಲವೂ ಅಂದಿನಂತೆ ಇಲ್ಲ. ಶೋಷಿತ ವರ್ಗಗಳು ಜಾಗೃತರಾಗಿದ್ದಾರೆ. ಮನುಜ ಮತ ವಿಶ್ವ ಪಥ ಎಂಬುದನ್ನರಿತಿದ್ದಾರೆ. ಆದರೆ ಈ ಬದಲಾವಣೆ ಆರೋಗ್ಯಕರವಾಗಬೇಕೆ ಹೊರತು ಪ್ರಗತಿಪರರು ಹೀಯಾಳಿಸುತ್ತ ಧರ್ಮಗ್ರಂಥ ಸುಡುವ ಮಟ್ಟಕ್ಕಿಳಿಯುವುದು ಹುಚ್ಚಾಟ. ಸಾರವಿಲ್ಲದ ಸಂಶೋಧನೆಗಳನ್ನು ನಂಬಿಸುವುದು ಮೂರ್ಖತನ. ಪುರಾಣ ವ್ಯಕ್ತಿಗಳನ್ನು ಹಂಗಿಸಿ ವಿಕೃತ ಸಂತೋಷ ಪಡುವುದು ತರವಲ್ಲ, ಪುರಾಣ ಪಾತ್ರಗಳು ಮೌಲ್ಯ ಪ್ರತಿಪಾದನೆಗಾಗಿ ರಚಿತವಾದವುಗಳು.ಅವುಗಳ ಅಸ್ತಿತ್ವ ಮುಖ್ಯವಲ್ಲ, ನಿಂಮ ಧರ್ಮವನ್ನ ನಿಂಮ ರೀತಿಯಲ್ಲಿ ಆಚರಿಸಿ.ಬೇರೆ ಧರ್ಮಗಳನ್ನು ಅದರ ನಂಬಿಕೆಗಳನ್ನು ಹೀಯಾಳಿಸುತ್ತ ಒದರುವುದು ಪ್ರಗತಿಪರತೆ ಅಲ್ಲ.

ಬೆಳಕಿಂಡಿ

ಕತ್ತಲ ಕೋಣೆ ಸಾಗಿದಂತೆ ಸಿಗುತಿಲ್ಲ ಯಾವುದೇ ಗೋಡೆ,ಕಿಟಕಿ,ಬಾಗಿಲು ಎದೆಯಲೇನೋ ದಿಗಿಲು ದನ ತಿಂದು ಹಸಿವು ನೀಗಿಸಿದವರು ಯಾರದೋ ಭಯಕ್ಕೆ ನಲುಗಿ ಅಸ್ತಿತ್ವ ಕಳೆದುಕೊಂಡವರು ಕಣ್ಣೀರಲೇ ನೆನೆದು ಒಡಲ ಹೊರೆದವರು ಮುಗಿಲು ನೋಡುತ್ತ ಪಾತಾಳ ಕಂಡವರು ಅನಿಷ್ಟಕ್ಕೆಲ್ಲ ಶನಿಯೇ ಕಾರಣನಲ್ಲ ನಿಂಮ ತುಳಿದವರು ಇಂತವರೇ ಅಲ್ಲ ಕಂತೆ ಪುರಾಣಗಳನು ನಂಬಿ ನಂಬದಿರಿ ಅಂತೆಯೇ ಎಂದೂ ಬಾಳದಿರಿ ಬೆಳಕಿಗಾಗಿ ನಂಮ ಬದುಕು ಮಾನವತೆಯಲ್ಲಿ ಅದನು ಹುಡುಕು ತಿಂದು ತೊಡುವ ಗೊಡೆವೆ ಬೇಡ ನಮಗೆ ಉಳಿಯುವುದು ಸತ್ಕರ್ಮಗಳು ಮಾತ್ರ ಕೊನೆಗೆ ಕತ್ತಲು ಕೋಣೆಗೆ ಹುಡುಕೋಣ ಎಲ್ಲರೂ ಸೇರಿ ಬೆಳಕಿಂಡಿ ಸಾಗಲಿ ಸಾಂಗತ್ಯ ನಲಿವಿಂದ ಬದುಕು ಜಟಕಾ ಬಂಡಿ -- ರನ್ನ ಕಂದ

ನಡುರಾತ್ರಿ

ನಿದ್ದೆ ಜೋರು ಸತ್ತ ಹೆಣದಂತೆ ಮೈ ಮೈಕೆಳಗೆ ಮೆತ್ತನೆಯ ಹಾಸು ಮನದೊಳಗೆ ಕೊಳಕು ಕಾಠಿಣ್ಯದ ರೇಸು ಸೋಂಪಾದ ಸುಖ ನಿದ್ರೆ ಹಲವು ಸುಖವಿರುವ ಕನಸುಗಳ ಪರುವ ಬಡವ ಬಲ್ಲಿದರ ಏಕಮಾನ ನಡುರಾತ್ರಿಯ ತುಂಬ ಒಂದೇ ತೆರ ಮೌನ ಹೊಕ್ಕ ಇರುಳು ನೆಮ್ಮದಿ ತುಂಬಿದ ಕೊರಳು ಬಾಳದಿನದಲ್ಲೀಗ ನಡುರಾತ್ರಿ ಮುಂದೆ ಬೆಳಗು ಬೈಗು ಇರಲೀ ಸದಾ ತಂಪೆರೆವ ನಡುರಾತ್ರಿ ನೋವಿನೊಳಗಿಂದು ಅಡಗಿದೆ ನಲಿವು ತುಂಬಿದ ಮೈತ್ರಿ --- ರನ್ನ ಕಂದ

ಬೆಂಕಿ

ಬೆಂಕಿ ನಗುತ್ತಿದೆ ದಲಿತರ ಕಪ್ಪು ಚರ್ಮವ ನೋಡಿ ತನ್ನ ಧಗೆಯೊಳಗೆ ಅವಿತ ಕಪ್ಪಿನೊಂದಿಗೆ ಹೋಲಿಸಿಕೊಂಡು ಬೆಂಕಿ ನಗುತ್ತಿದೆ ಬಿಳಿಯ ಹೂವುಗಳು ಮಾತ್ರ ಅರಳುತ್ತಿವೆ ದಿನವಿಡೀ ಬದುಕಿ ಅರಳಿಸದೇ ಉಳಿದವುಗಳ ನೆರಳಿಗಷ್ಟೇ ನೂಕಿ ಸತ್ತ ಸಾವಿಗೂ ಸುದ್ದಿಯಿಲ್ಲದಂತೆ ಬೆಂಕಿ ಸದ್ದಡಗಿಸುತಿದೆ ತನ್ನ ತಾನರಿಯದ ಕಪ್ಪು ಬೆಪ್ಪಾಗುತಲಿದೆ ಬೆಂಕಿಯ ಅಪ್ಪಿ ಮುಪ್ಪಾಗುತಿದೆ ಮೈ ಬೆವರು ರಕ್ತ ತಿಂದು ತೇಗುವುದೆಲ್ಲ ಒಂದೇ ಇರಲು ಎಲ್ಲಿಯದು ಈ ದಲಿತ ಪಟ್ಟ ಕಟ್ಟಬೇಕಿದೆ ಈ ಬಗೆಯ ಶೋಷಣೆಗೆ ಚಟ್ಟ ಬೆಂಕಿಯ ನಗುವಳಿಸಿ ಸುಟ್ಟ ಗಾಯದನುಭವವ ಮಾಡಿಸಬೇಕಿದೆ ಈ ಹಾಳು ಬೆಂಕಿಗೆ., --- ರನ್ನ ಕಂದ

Email Sent from Mobile

??? ? ??????? ??????? ?????????? ? ????? ??? ? ???? ??????? ??????? ??????????? ? ????? ??????? ??? ?????? ???????? ??????? ????????? ??????? ???????? ???????? ???????? ???????? ????????? ??????? ????? ???????? ??????? -- ???? ???

ಭೂತಾಯಿಯ ಅಳಲು

ಜಲ ಕೊಟ್ಟೆ ನೆಲ ಕೊಟ್ಟೆ ಉಸಿರಾಡಲು ಬಲ ಕೊಟ್ಟೆ ಸಿರಿ ಕೊಟ್ಯೆ ಸುಖ ಕೊಟ್ಟೆ ಹೆಸರಾಗೋ ಛಲ ಕೊಟ್ಟೆ ಬಲಿತು ನರ ನೀನು ಮಗುವೆಂದೇ ಮುದವಿಟ್ಟೆ ಅದಕೆ ನೀ ಪ್ರತಿಯಾಗಿ ನನ್ನೆದೆಗೆ ನೋವಿಟ್ಟೆ ಹಿಂದೆಂದೂ ಕಂಡಿರದ ಕಷ್ಟಗಳ ತಂದಿಟ್ಟೆ ಅರಿಯದಿರೇ ನೀನಿದನು ಒಡೆವುದು ಸಹನೆ ಕಟ್ಟೆ -- ರನ್ನ ಕಂದ

ಮಳೆ ಬಿಲ್ಲು

ಬಿಸಿಲ ಎದೆಗೆ ಸುರಿದ ಮಳೆ ನೆಲದಿ ಘಮದ ಸೊಲ್ಲು ಗಗನದಂಚು ಸೇರಿ ಇಳೆ ನಡುವೆ ಮಳೆಯ ಬಿಲ್ಲು --- ರನ್ನ ಕಂದ

ವಾಸ್ತವ

ಸದ್ಯಕ್ಕೆ ಇಲ್ಲೇ ಇದ್ದೇನೆ ಅಸಹನೀಯ ಸನ್ನಿವೇಶದಲಿ ಆಗಾಗ ಉಸಿರಾಡುತ್ತ ಚೀರಾಡುತ್ತ ಸತ್ಯವನು ಕತ್ತಲೆಯಿಂದ ತೊಳೆಯುತ್ತ ಇಲ್ಲೇ ಇದ್ದೇನೆ ಬುದ್ಧನ ನಗು ಕೇಳಿಸಿದರೂ ನಗಲಾರದ ಸ್ಥಿತಿ ನಂದು ಎಲ್ಲ ವೇದಾಂತ ಕಟ್ಟಿದ್ದೇನೆ ಅವುಗಳ ಮೇಲೆ ನಿಂತಿದ್ದೇನೆ ಇಲ್ಲೇ ಇದ್ದೇನೆ ಸಾವಿನ ಹೆಗಲಿಗೆ ಏಣಿ ಬರುವ ತನಕ ಬದುಕಿಗಾಗಿ ಬಡಿದಾಡುತ್ತ ಇಲ್ಲಿಯೇ ಇದ್ದೇನೆ --- ರನ್ನ ಕಂದ

ಪರಿಣಾಮ

ಹೂವೇನೋ ಅರಳುತ್ತವೆ ಜತೆಗೆ ಪುಂಡ ದುಂಬಿಗಳು ಕೆರಳುತ್ತವೆ ಎಲ್ಲ ಮುಗಿದಾಗ ಮನಸುಗಳು ನರಳುತ್ತವೆ -- ರನ್ನ ಕಂದ

ಈಗ

ಕಣ್ಣ ಕೂಡಿ ಮಾತುಗಳನು ಆಡಲಾರೆ ನಾ ನೆದರು ನೇರ ದಿಟ್ಟಿಸುತಲಿ ನೋಡಲಾರೆ ನಾ ಎದೆಯ ಹಾದಿ ತುಂಬ ಸಾಲು ಸಾಲು ದೀಪದಂತೆ ಹೆಜ್ಜೆ ನಡೆಯ ರೀತಿ ತುಂಬ ಹಾಗೇ ಹಾಗೇ ಕುಣಿದ ಗೆಜ್ಜೆ ಮನದ ಮುಗಿಲ ಅಂಚಿಗೆಲ್ಲ ನೋವು ತುಂಬಿದ ಮೋಡ ಹರೆಯ ವನದ ಕೊರಳಿನಲ್ಲಿ ಬರಿಯ ವಿರಹ ಹಾಡ -- ರನ್ನಕಂದ

ಪ್ರತಿಫಲ

ಬಡವನಾಗಿ ಹುಟ್ಟಿ ಗಳಿಸಿದ್ದು ಬರೀ ಹೃದಯ ಶ್ರೀಮಂತಿಗೆ ಹಸಿದ ಹೊಟ್ಟೆಯನದು ತುಂಬಲಿಲ್ಲ ಬಡವನಿಗೆ ಸಿಟ್ಟಿನ ಹೊರತು ದವಡೆಗೆ ಏನೂ ದಕ್ಕಲಿಲ್ಲ -- ರನ್ನ ಕಂದ

ಹೋರಾಟ

ಅಳಿದುಳಿದ ಕನಸುಗಳ ಹೊತ್ತು ನಿಂತಿದ್ದೇನೆ ಕನಸ ಕೊಲ್ಲುವವರ ನಡುವೆ ಮನಸು ಮಾಡಿ ನನಸಾಗಿಸಲು ಮೈ ತುಂಬ ಗಾಯ ಮಾಗಬಹುದು ಛಲವಿಲ್ಲದ ಕಾರ್ಯ ಗೆಲ್ಲಬಹುದೇ? ಒಂದು ಕೈಯಲ್ಲಿ ಪ್ರಯೋಗ ಇನ್ನೊಂದರಲ್ಲಿ ಹೋರಾಟ ಅಸ್ತ್ರಗಳೆರಡನ್ನು ಹಿಡಿದು ಸನ್ನದ್ಧನಾಗಿದ್ದೇನೆ -- ರನ್ನ ಕಂದ

ಇಂದಿನ ರೈತ

ನೇಗಿಲು ಸಹ ಈಗೀಗ ಶೂಲದಂತೆ ತೋರಿ ಇರಿದಂತೆ ಹೆದರಿಸುತ್ತಿದೆ ಕ್ಯಾಲೆಂಡರ್ ನ ದಿನಗಳು ಸಾವಿಗೆ ನೇರ ಸೋಪಾನದ ಹಿಡಿಕೆ ಬರದ ಮಳೆ ಎದೆಯ ಕನಸುಗಳನು ಅಣಕಿಸುತಿದೆ ಬ್ಯಾಂಕಿನ ಸಾಲದ ಅಂಕಿಗಳು ಎದೆಯ ನಡುಗಿಸುತಿವೆ ನೇಗಿಲ ಯೋಗಿಯ ಧರ್ಮ ಅನಾಥ ಎಲ್ಲ ಜಂಜಾಟಗಳ ಉರುಳು ಬಿಟ್ಟೀತೇ ಇವನ ಕೊರಳು ಸಾವೇ ಸದ್ಯ ಅವನ ಬಂಧು ಶರಣಾಗುತಿಹ ತನ್ನ ಸ್ವಾಭಿಮಾನವ ಕೊಂದು. -- ರನ್ನ ಕಂದ

ಹೋಲಿಕೆ

ಮನುಜನೆದೆಯ ಮಾತ್ಸರ್ಯದ ಬೆಂಕಿಯ ಮುಂದೆ ಸೂರ್ಯನೆದೆಯ ಬೆಂಕಿ ತುಸು ಡಲ್ಲು -- ರನ್ನ ಕಂದ

ಅಸಲು-ಬಡ್ಡಿ

ನಿನ್ನ ಸ್ನೇಹದ ಸಾಲಕ್ಕೆ ಅನುದಿನವೂ ಪ್ರೇಮದ ಬಡ್ಡಿ ಕಟ್ಟುತ್ತಿರುವೆ -- ರನ್ನ ಕಂದ

ಪ್ರಶಸ್ತಿ ವಾಪಸಾತಿ ಪ್ರಹಸನ

ಅಂದು ಪಡೆದೆವು ಪದವಿ ಗೌರವ ಸಾರಸ್ವತದ ಪ್ರಶಸ್ತಿಯ ಇಂದು ಉರಿಯಿತು ಮನದಿ ರೌರವ ಮರಳಿಸುತಲಿ ಪ್ರಶಸ್ತಿಯ ರೈತನೊಡಲಿನ ಬರಿಯ ಬಾನಲ ನಮ್ಮ ಕಣ್ಣಿಗೆ ಕಾಣದು ಚೈತ್ರಹೆಣ್ಣಿನ ಜೀವಹರಣವು ನೆಮ್ಮಿ ಎಂದು ತೋರದು ಮಡಿದು ಹೋದ ದಕ್ಷ ರಕ್ಷಕ ನಮ್ಮ ನೆನಪಿಗೆ ಬಾರನು ಗೋವುಹಂದಿಯ ತಿನ್ನಲೆಸಗುತ ಮರೆವೆವಿನ್ನು ನಮ್ಮನು ನೆರೆಯ ಮನೆಯ ದುಃಖ ನೋಡುತ ನಿಂತ ನಮ್ಮಯ ಪಾಡನು ಹಾಡತೊಡಗಿವೆ ಒಂದೇ ಗೂಡಿನ ಒಂದೇ ಚೊಲ್ಲಿನ ಹಾಡನು ಒಂದು ಬೀಳಲು ಎಲ್ಲ ಬಿದ್ದವು ಎಂತ ಸುಂದರ ನಾಟಕ ಎಲ್ಲ ಮನದಿ ಲೆಕ್ಕ ತಪ್ಪಿದ ಪೂರ್ಣವಲ್ಲದ ಕೋಷ್ಠಕ