Posts

Showing posts from April, 2010

ಜತೆಯಾದರೆ ನೀವು....

ಹಾಯ್ ಗೆಳೆಯರೆ,   ನಿಮ್ಮ ಒಳಗಿನ ಲೇಖಕ ಲೇಖಕಿಯನ್ನು ಬರೆಯಲು ಕೂಡಿಸಿ. ನಿಮ್ಮ ಬರಹಗಳನ್ನು ನನ್ನ ಿಮೇಲ್ ವಿಳಾಸಕ್ಕೆ ಕಳುಹಿಸಿ. ನನ್ನೊಂದಿಗೆ ಸಾಥ್ ನೀಡಿ.ಸದ್ಯ ಮುಧೋಳದ ನನ್ನ ತಮ್ಮ ನವೀನ್ ಕುಮಾರ ಬಿ.ಹಿರೇಮಠ, ಗೆಳತಿ ರಾಜೆಶ್ವರಿ ಬಿ.ಕೆ ಹಾಗೂ ಗೆಳೆಯ ಸಂಗಮೇಶ ಯಾಳವಾರ ಈ ಸಲ ನಿಮ್ಮ ಮುಂದಿದ್ದಾರೆ..                                  -ಸಚಿನ್ ಕುಮಾರ ಬಿ.ಹಿರೇಮಠ,                                   sachin_b1985@yahoo.co.in

ಜಗನಯನ

ನಾ ನಿನ್ನ ಪ್ರೀತಿಸುವಾಗ ನಿನ್ನ ಕಣ್ಣುಗಳಲ್ಲಿ ಜಗವ ಕಂಡೆ ನೀ ನನ್ನಿಂದ ದೂರಾದಾಗ ಜಗದೊಳಗೆ ನಿನ್ನ ಕಣ್ಣುಗಳ ಕಂಡೆ    ---ಸಂಗಮೇಶ ಯಾಳವಾರ, ಬಿಜಾಪುರ

ಕಂಬನಿ

ನನ್ನ ಕಂಬನಿಯಲಿ ನಿನ್ನದೇ ಬಿಂಬ ಕಂಡು ಕುಷಿಯಾಗುತ್ತೇನೆ. ನನ್ನ ಹೊರತು ನಿನ್ನ ಯಾರೂ ನೋಡದಿರಲೆಂದು ನಾನೇ ಕೊಡವಿಕೊಳ್ಳುತ್ತೇನೆ.     ---ರಾಜೇಶ್ವರಿ ಬಿ.ಕೆ, ಜವಳಗಾ

ಬತ್ತಿಲ್ಲ....

ಗೆಳತಿ, ನನ್ನ ಈ ತೂತು ಬಿದ್ದ ಹೃದಯದೊಳಗೆ ಒಮ್ಮೆ ಇಣುಕಿ ನೋಡು ಬತ್ತಿಲ್ಲ ನನ್ನಲ್ಲಿ ಪ್ರೀತಿಯ ಹನಿಗಳು ಇನ್ನೂ ತೊಟ್ಟಿಕ್ಕುತ್ತಿವೆ ನೋಡು...    ---ನವೀನ್ ಕುಮಾರ ಬಿ.ಹಿರೇಮಠ, ಮುಧೋಳ

ಬದುಕು ಬದುಕಾಗಬೇಕಾದರೆ...

ಅದೊಂದು ಸುಡು ಬಿಸಿಲಿನ ಮಧ್ಯಾಹ್ನ. ಎತ್ತ ನೋಡಿದರತ್ತ ಭಣಗುಡುವ ಬಿಸಿಲು. ಬೆಂಕಿಯಂತೆ ಕಾದಿತ್ತು ಭೂಮಿ. ಇಂಥ ವಿಷಣ್ಣ ಸ್ಥಿತಿಯಲ್ಲಿ ದಾರಿಹೋಕನೊಬ್ಬ ತುಂಬಾ ದಣಿದು ಆ ದಾರಿಯುದ್ದಕ್ಕೂ ನಡೆದು ಬರುತ್ತಿದ್ದ. ತುಸು ದೂರ ನಡೆದ ಬಳಿಕ ಅವನಿಗೆ ಒಂದು ತೋಪು ಕಂಡಿತು. ಅದರಲ್ಲಿ ಮಾವು ಬೇವು,ಆಲದಂತಹ ಮರಗಳೂ, ಟೊಮೊಟೊ, ಈರುಳ್ಳಿ, ಕುಂಬಲ, ಸೌತೆಯಂತಹ ಗಿಡಬಳ್ಳಿಗಳೂ ಕಂಡವು. ಜತೆಗೆ ಅಲ್ಲೊಂದು ನೀರಿನ ಒರತೆ.ದಾರಿ ಹೋಕನಿಗೆ ಅದು ಒಂದರ್ಥದಲ್ಲಿ ಸ್ವರ್ಗವೇನೋ ಎಂಬಂತೆ ತೋರಿತು. ಹೊಟ್ಟೆ ಬೇರೆ ಹಸಿದಿತ್ತು. ಹೀಗಾಗಿ ತಾನು ತಂದಿದ್ದ ಬುತ್ತಿ ಸಮೇತ ತೋಪಿನೊಳಗೆ ಸೇರಿಬಿಟ್ಟ ಆ ದಾರಿಹೋಕ. ಹೊಟ್ಟೆ ತುಂಬಿಸಿಕೊಂಡು ಅಲ್ಲಿದ್ದ ಬೇವಿನ ಮರದ ಕೆಳಗೆ ವಿಶ್ರಮಿಸಿದ.ಅಲ್ಲಿದ್ದ ಮರಗಿಡಬಳ್ಳಿಗಳನ್ನೊಮ್ಮೆ ಎಗ್ಗಿಲ್ಲದಂತೆ ದಿಟ್ಟಿಸಿದ.ಆ ಸೃಷ್ಟಿಯಲ್ಲಿ ಏನೋ ಪ್ರಮಾದವಿರುವಂತೆ ಕಂಡಿತು ಆ ದಾರಿಹೋಕನಿಗೆ. "ಎಲ್ಲ ದೊಡ್ಡ ದೊಡ್ಡ ಮರಗಳಲ್ಲಿ ಚಿಕ್ಕ ಚಿಕ್ಕ ಕಾಯಿಗಳಿವೆ. ಬಲವಿಲ್ಲದ  ಬಳ್ಳಿಗಳಲ್ಲಿ ಭಾರದ ಕಾಯಿಗಳಿವೆ. ಇದೆಂಥ ಅಸಮಾನತೆ? ಹೀಗೆ ವೈರುಧ್ಯದಿಂದ ನಿಸರ್ಗವನ್ನು ಸೃಷ್ಟಿಸಿದ ಆ ದೇವರಿಗೆ ನನ್ನ ಧಿಕ್ಕಾರವಿದೆ. ಅವುಗಳ ಆಕಾರಕ್ಕೆ ತಕ್ಕಂತೆ ಕಾಯಿಗಳನ್ನು ಸೃಷ್ಟಿಸಬಹುದಿತ್ತಲ್ಲ ಆ ದೇವರು.? ನಿಜಕ್ಕೂ ಆ ದೇವರು ಮಹಾ ಮೂರ್ಖ..!" ಅಂತ ಸ್ವಗತ ಗೈದು ತುಸು ಹೊತ್ತು ನಿದ್ರಿಸಲನುವಾದ.ಿದೆ ವೇಳೆ ಬೆವಿನ ಮರದಿಂದ ಬೇವಿನ ಕಾಯಿಯೊಂದು ದಾ...