Posts

Showing posts from August, 2009

ಪ್ರೀತಿ

ನೀನಿರುವಾ ಎದೆಯಲ್ಲಿ  ಈ ಒಲವದು ಚಿಮ್ಮುತಿದೆ.. ಕಾರಿರುಳ ಕನಸಲ್ಲಿ  ಆ ಬೆಳಕದು ಹೊಮ್ಮುತಿದೆ.. ಈ ನಿರ್ಮಲ ಮನಸಿನ ಪ್ರೀತಿಯಲಿ ಬರಿ ನಿನ್ನದೇ ಪಾಲು ಇದೆ.. ಸವಿ ಕೋಮಲ ಕನಸಿನ ರೀತಿಯಲಿ ಹಗಲೆನ್ನದೇ ಕಾಡುತಿದೆ.. ---ಸಚಿನ್ ಕುಮಾರ ಬಿ.ಹಿರೇಮಠ

ನಯನಗಳು

ನಯನಗಳು ತಾರೆಗಳ ಹೊಳಪನು ಒಪ್ಪುತಿವೆ.. ಹೂ ನಗೆಯು ಹಿತವಾಗಿ ತುಟಿಗಳು ಅಪ್ಪುತಿವೆ ಮನಸಿನ ಕೊಳದಲಿ ಜಾರೋ ಎಳೆಯ ಮೀನಿನ ತೆರದಿ ತೋರೋ ಎರಡು ಪದಗಳು.. ಒಲವ ಸುಮಗಳು.. ---ಸಚಿನ್ ಕುಮಾರ ಬಿ.ಹಿರೇಮಠ

ಮೊದಲ ಪ್ರೀತಿ..

ಮೊದಲ ಸಲ ನಿನ್ನ ನೋಡಿದಾಗಲೇ ತಗುಲಿತೆನಗೆ ಪ್ರೀತಿ ಎಂಬ ಖಾಯಿಲೆ ನನಗೆ ನೀನು ಹೂವಿನಂತೆ ಕೋಮಲೆ ದುಂಬಿಯಂತೆ ಇನ್ನು ನಾನು ನಿನ್ನಲೇ ತುಂಬಿಕೊಳ್ಳೆ ನನ್ನ ನಿನ್ನ ಕಣ್ಣಲೇ...   ---ಸಚಿನ್ ಕುಮಾರ ಬಿ.ಹಿರೇಮಠ

ಕೋರಿಕೆ

ಪ್ರೀತಿಯ ಹೂವಿಗೆ ವಿರಹದ ಮುಳ್ಳು ಪ್ರೀತಿಯ ಬಾಳಿಗೆ ಸರಿಗಮ ಸೊಲ್ಲು ಒಲವಲಿ ನೀನಿದಾ ಮೆಲ್ಲು ಚೆಲುವಲಿ ಈ ಮನ ಗೆಲ್ಲು ..                ---ಸಚಿನ್ ಕುಮಾರ ಬಿ.ಹಿರೇಮಠ

ಪ್ರೀತ್ಸೋಕೆ ಏನು ಬೇಕು....?

Image
ಈ ಎರಡಕ್ಷರ ಕಿವಿಗೆ ಬಿದ್ದಾಗ, ಕಣ್ಣಿಗೆ ಕಂಡಾಗ ಎದೆ ಝಲ್ಲೆನ್ನುತ್ತದೆ. ಪ್ರೀತಿಯ ಬಗ್ಗೆ ನಮ್ಮಲ್ಲಿ ಪದಗಳಿಂಗ ಭಾವನೆಗಳೇ ಜಾಸ್ತಿ.ನಮ್ಮ ಅರಿವಿನಂತರಾಳಕ್ಕೆ ಪ್ರೀತಿ ಅನುರಣಿಸುವುದು ಒಂದು ಕ್ರಮಬದ್ಧವಾದ ವಯಸ್ಸಿನಲ್ಲೇ. ಸ್ಕೂಲುಗಳಲ್ಲಿ, ನಮ್ಮ ನಮ್ಮ ಮನೆಗಳಲ್ಲಿ ನಮ್ಮವರು ಎನಿಸಿಕೊಂಡವರು ನಮ್ಮನ್ನು ಪ್ರೀತಿಸಿರುತ್ತಾರೆ. ಆದರೆ ಅದು ಅಪ್ರಕ್ಷುಬ್ಧ ಪ್ರೀತಿ. ಅದು ಒಂದು ಅನಿವಾರ್ಯತೆಗೆ ಒಳಪಟ್ಟು ಸಂಬಂಧಗಳಲ್ಲಿ ನುಸುಳಿ ಗಟ್ಟಿಗೊಳ್ಳಲು ಪ್ರಯತ್ನಿಸಿ, ಕೊನೆಗೆ ಗಟ್ಟಿಗೊಂಡಿರುತ್ತದೆ. ಅಲ್ಲಿ ಮೊದಲು ಸಂಬಂಧಗಳು ಬೇರೂರಿ ಬಳಿಕ ಕ್ರಮೇಣ ಪ್ರೀತಿಯ ಹೂವರಳಿಸಲಾರಂಭಿಸುತ್ತದೆ. ಅಲ್ಲಿ ಪ್ರೀತಿ ಅನ್ನೋದು 'ಮಾಡಲೇಬೇಕಾದ' ಅನಿವಾರ್ಯತೆ. ಈ ಅನಿವಾರ್ಯತೆ ಕೆಲವೊಮ್ಮೆ optional ಅಂತನ್ನಿಸಿದರೆ ಅಲ್ಲಿನ ಸಂಬಂಧಗಳು ಬಿರುಕು ಬಿಡಲಾರಂಭಿಸುತ್ತವೆ. So ಈ ಪ್ರೀತಿ ನಮಗೆ ಕೆಲವೊಮ್ಮೆ ಹೊಸತು ಎನ್ನಿಸುತ್ತಾದರೂ ಅದು ಅತೀ ಮುಖ್ಯವಾದುದು ಎಂಬುದು ಮಾತ್ರ ನಿಜ. ಈಗ ನಾನು ಹೇಳ ಹೊರಟಿರುವುದು ಈ ತರಹದ ಪ್ರೀತಿಯ ಬಗ್ಗೆ ಅಲ್ಲ. ಹೃದಯವನ್ನು ಹೂವಾಗಿಸುವ, ಹದಿವಯಸುಗಳ ಮನಸ್ಸನ್ನು ಹೊಕ್ಕು ಕಚಗುಳಿಯಿಡುವ, ಮೈ ನವಿರೇಳಿಸುವ ಮದುರ ಅನುಭೂತಿ ನೀಡುವಂಥ ಪ್ರೀತಿ ಬಗ್ಗೆ. 'ಪ್ರೀತ್ಸೋಕೆ ಏನುಬೇಕು' ಅಂತ ಮೊನ್ನೆ ಗೆಳೆಯನೊಬ್ಬ ಕೇಳಿದ. ಏನೊಂದು ತೋಚದೇ ಮೊಬೈಲನ್ನು ಆಚೆಗಿಟ್ಟು ಕುಳಿತುಬಿಟ್ಟೆ. ಮನಸ್ಸು ಒಂಟಿಯಾಗುವುದನ್ನೇ ಕಾಯುತ್ತಿದ್ದ ಈ ಪ್ರಶ್ನೆ ಮತ್ತ...

ಬದುಕ ದಾರಿಯಲಿ ಕಳೆದು ಹೋದವಳೇ....

ಅ ವಳು ಈಗಲೂ ನೆನಪಾಗುತ್ತಿದ್ದಾಳೆ. ಸ್ನಿಗ್ಧ ಸೌಂದರ್ಯ, ಏನ್ನನೋ ಹೇಳ ಬಯಸುವ ಕಂಗಳು, ಇರುಳನ್ನೇ ನಾಚಿಸುವಂಥ ಮುಂಗುರುಳು, ಚೆಂದುಟಿಯ ಮೇಲೆ ನಳನಳಿಸುವ ಹೂ ನಗೆ, ನಿತಂಬದವರೆಗಿನ ಜಡೆ - ಎಲ್ಲವೂ ಮನಸ್ಸನ್ನು ಕಲಕಿ ಮಧುರ ಭಾವದಲೆಗಳ್ನು ಎಬ್ಬಿಸಿತ್ತು. ಅವಳು ಯಾಕಾದರೂ ನನಗೆ ಪರಿಚಯವಾದಳೋ...?ಅವಳಿಲ್ಲದ ಈ ಕ್ಷಣಗಳನ್ನು ಯಾಂತ್ರಿಕವಾಗಿ ಕಳೆಯುತ್ತ ಹೋದಲ್ಲಿ ಬದುಕಿಗಿರುವ ಮಹತ್ವವಾದರೂ ಏನು..? ಅವಳು ಮತ್ತೇ ನನನ್ ಹೃದಯಂತರಾಳದೊಳಕ್ಕೆ ಬಂದು ಸೇರುತ್ತಾಳೋ, ಬದುಕಿನ ನೀರವತೆಯನ್ನು ಕಳೆದು ಕಲರವವಾಗುತ್ತಾಳೋ ಒಂದು ಗೊತ್ತಿಲ್ಲ.. ನಮ್ಮ ನಮ್ಮ ನಡುವೆ ಹುಟ್ಟಿಕೊಂಡ ಸ್ನೇಹಲತೆಗೆ ನೀರೆರೆದಿದ್ದೆ ಈ ನನ್ನ ವೃತ್ತಿ. ವೃತ್ತಿಯನ್ನು ಪ್ರೀತಿಸಿಕೊಂಡಷ್ಟೆ ಅವಳ ಈ ಸ್ನೇಹವನ್ನು ಪ್ರೀತಿಸಿಕೊಂಡೆ. ಅವಳು ಬದುಕಿನುದ್ದಕ್ಕೂ ಕಾಣುತ್ತಿದ್ದ ಕನಸುಗಳು, ನನ್ನ ಭವಿಷ್ಯವ್ನನು ನನಗೆ ಚಿತ್ರಿಸಿಕೊಡುತ್ತಿದ್ದ ಬಗೆ, ಅವಳ ಆ ಒಂದು ಮನೋ ಇಂಗಿತ ಎಲ್ಲವನ್ನು ಅರಿತುಕೊಂಡೆ.ಅವಳ ಸ್ನೇಹದ ಸೋನೆ ಮಳೆಯಲ್ಲಿ ನನ್ನ ನೋವು ದುಗುಡಗಳೆಲ್ಲ ತುಸು ಕರಗಿ ಹೋದವೆನ್ನಿ. ಅವಳ ನಗುವಿನಾಳದಲ್ಲಿ ಪುಟಿದೆದ್ದು ಖುಷಿಯ ಸಂಗತಿಗಳನ್ನು ನಾನು ಲೆಖ್ಖವಿಟ್ಟಿಲ್ಲ. ಅವಳಾಡುತ್ತಿದ್ದ ಮಾತುಗಳಿಲ್ಲ.. ಹಾಡಿದ ಹಾಡುಗಳು, ಅದೆಷ್ಟೋ ಮನಸುಗಳಿಗೆ ಜೀವ ಲಾಲಿಯಂತೆ.. ನಿನ್ನ ಸಾಂಗತ್ಯ ಆದರೆ ನೀನು ಹೇಳ ಹೆಸರಿಲ್ಲದಂತೆ ದೂರವಾದದ್ದೇಕೆ..?ಬದುಕಿನ ಮುಗಿಲಲಿ ಮಿಂಚಿ ಮಾಯವಾದ ಮಿಂಚಂತೆ.. ಸ್ನೇಹವೆಂಬ ಸೆಲೆ...

ಕನಸುಗಳು...

Image
ಸಾಲುಗಟ್ಟಿ ಕುಳಿತಿವೆ ಕನಸುಗಳು ಮನದ ಬಾಲ್ಕನಿಯಲ್ಲಿ.. ನೆನಪಾಗಿ ಹಾರುವ ಹಸಿ ನಿರೀಕ್ಷೆಯಲ್ಲಿ ಇರುಳಿನ ತುಂಬ ಇಣುಕುತ್ತಿವೆ... ಬುದ್ಧ, ಬಸವ, ಗಾಂಧೀ, ನೆಹರು ಹೀಗೆ ನೂರಾರು.. ಚುಕ್ಕಿ ಚಂದ್ರಮರೆತ್ತರಕೆ ಚಿಮ್ಮಿದರೂಬಲುಗಟ್ಟಿ ಹೃದಯಂತರಾಳದ ಬೇರು... ಹಸಿದವರ ಬವಣೆ ನೀಗಿಸೋ ಕನಸು..ಜಗದಳುವ ನೀಗಿ ನಗಿಸೋ ಕನಸು..ಇಂಥ ಸ್ವಚ್ಛಂದಮಯ ಕನಸುಗಳಿಗೆ ಹಾತೊರೆಯುತ್ತಿದೆ ಎನ್ನ ಮನಸು.... --- ಸಚಿನ್ ಕುಮಾರ ಬಿ.ಹಿರೇಮಠ

ಗಣೇಶ ಬಂದ..

Image
ಮತ್ತೊಮ್ಮೆ ಗಣೇಶ ಬರುತ್ತಿದ್ದಾನೆ. ಮಳೆಯಿಲ್ಲದೆ ಪತರಗುಟ್ಟುತ್ತಿರುವ ರೈತಾಪಿ ಜನ ತುಸು ಸಾವರಿಸಿಕೊಂಡಿದ್ದಾರೆ. ಕಳೆದೆರೆಡು ವಾರಗಳಿಂದ ಸುರಿದ ಮಳೆಗೆ ಹೃನ್ಮನಗಳು ನಲಿದಿವೆ. ಕೈ ಮೀರಿ ಹೋಗುತ್ತಿದ್ದ ಬೆಳೆಗಳಿಗೆ ನವ ಜೀವ ಕಳೆ ಬಂದಿದೆ. ಮುಗಿಲಿನ ೊಡಲಿನ ಭ್ರೂಣಗಳ ತೇಲುವಿಕೆ ಶುರುವಾಗಿದೆ. ಮುಂಗಾರು ಮಳೆಯ ಲೀಲೆ ಇನಿತು ಇನಿತಾಗಿ ಶುರುವಾಗಿದೆ. ವಿದ್ಯುದಭಾವದ ಸಮಸ್ಯೆ ತುಸು ನಿರಾಳವಾಗಿದೆ. ಸರ್ಕಾರದ ಹುಸಿ ಭರವಸೆಗಳು ಇನ್ನೂ ಭರವಸೆಗಳಾಗಿಯೆ ಉಳಿದಿವೆ. ಈ ನಡುವೆ ಚುನಾವಣೆ ಮತ್ತೊಮ್ಮೆ ಇಣುಕಿ ನಿಚ್ಚಳವಾಗಿದೆ. ದೇಶದ ಭದ್ರತೆಗೆ ದಕ್ಕೆ ಬರುವಂತ ಸೂಚನೆಗಳ ನಡುವೆಯೂ ದೇಶದ ಜನತೆ ನಿರುಮ್ಮಳವಾಗಿದೆ. ಎಲ್ಲಿಂದಲೋ ಇಲ್ಲಿಗೆ ವಕ್ಕರಿಸಿಕೊಂಡ 'ಹಂದಿ ಜ್ವರ' ತುಸು ಆತಂಕವನ್ನು ಸೃಷ್ಟಿಸಿದೆ. ಒಂದು ದೇಶದ ಭದ್ರತೆ ಆ ದೇಶದ ಆರೋಗ್ಯ ಸಮಪನ್ಮೂಲದ ಮೇಲೆ ನಿರ್ಭರವಾಗಿದೆ. ಅದಕ್ಕೆಂದೇ ನಾನಾ ಕಡೆ H1N1 ದ ಲಕ್ಷಣಗಳು , ಮುನ್ನೆಚ್ಚರಿಕೆಯ ಕ್ರಮಗಳು, ಚಿಕಿತ್ಸಾ ವಿಧಾನಗಳ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇಷ್ಟೆಲ್ಲ ಗೀಳು ಗೋಳಗಳ ಮಧ್ಯೆ ಗಣೇಶ ಮತ್ತೇ ಬರುತ್ತಿದ್ದಾನೆ. ಪ್ರತಿ ಸಲ ಗಣೇಶ ಬರುವಾಗ ಎಲ್ಲಿಲ್ಲದ ಸಂಭ್ರಮ ನಮ್ಮ ದೇಶದ ಜನತೆಯಲ್ಲಿ.. ಆದರೆ ಈ ಸಲ ನಾನಾ ಸಂಕಷ್ಟಗಳೊಂದಿಗೆ ವಿಘ್ನ ನಿವಾರಕ ಆಗಮಿಸುತ್ತಿದ್ದಾನೆ. ಆದರೆ ಈಗ ೊದಗಿರುವ ವಿಘ್ನಗಳಿಗೆ ಗಣೇಶನಾಗಲೀ, ಅಥವಾ ಯಾವ ದೇವರಾಗಲೀ ಕಾರಣರಲ್ಲ.. ಪರಿಸರದ ಬಗ್ಗೆ ನಮ್ಮ ನಿಷ್ಕಾಳಜಿ,...

ತೀರದ ನಂಟು..

ದೂರವಾಗುತ್ತಲೇ ಮತ್ತೇ ಸಮೀಪಿಸಿ ಮುತ್ತಿಕ್ಕಿ ಹೋಗುತಿವೆ ತೊರೆಗಳು ತೊರೆಯದೇ ತೀರದ ಬಂಡೆಗಳ... ಕರಗುತಿವೆ ಬಂಡೆಗಳು ಯಾವ ಸಂಭ್ರಮಕ್ಕೋ ಸೋತು ಸಣ್ಣವಾಗುತಿವೆ ಅರೆಘಳಿಗೆ ನಿಲ್ಲದೆಯೇ ಓಡುತಿವೆ ತೊರೆಗಳು... ಏನು ಹೆಸರೋ..? ಈ ಹೆಸರಿಲ್ಲದ ನಂಟಿಗೆ ಅಂಟಿಸುವವರು ಯಾರೋ ನಂಟಿನ ಹೆಸರು..? ಗಟ್ಟಿತನದ ಹೆಸರು... ಬಂಡೆಗಳ ನಂಬುಗೆ ತುಂಬು ಪ್ರೀತಿಯಲಿ ಬಲಿತು ಬೀಜವಾಗುತಲಿದೆ ಬೇರೂರಿ ತೀರದಲಿ ತೊರೆಯದ ತೊರೆಗಳಿಗೆ ಕಾಯುತ್ತ ನಿಂತಿವೆ... ಶತ ಶತಮಾನಗಳಿಂದಲೂ ಪ್ರೀತಿಯಿಂದಲೇ ಅಪ್ಪುತಿವೆ ಒಂದನ್ನೊಂದು ಧೇನಿಸುತ್ತ... ---ಸಚಿನ್ ಕುಮಾರ ಬಿ.ಹಿರೇಮಠ

ಗರ್ಲ್ ಫ್ರೆಂಡ್ ; ಹುಡುಗರಿಗೇಕೆ ಅನಿವಾರ್ಯ..?

ಪರಿಸ್ಥಿತಿಯಲ್ಲಿ 'ಗರ್ಲ್ ಫ್ರೆಂಡ್ ' ಪದದ ವ್ಯುತ್ಪತ್ತಿ ನಮಗೆ ಅವಶ್ಯವಿಲ್ಲ. ಈ ಪದ ಹೊಮ್ಮಿಸುವ ಅರ್ಥವನ್ನು ತಿಳಿದುಕೊಳ್ಳುವುದು ಅತ್ಯವಶ್ಯ. ಗರ್ಲ್ ಫ್ರೆಂಡ್ ಎಂಬುದರ ಅರ್ಥ ಸ್ನೇಹಿತೆ, ಗೆಳತಿ, ಸಖಿ ಎಂದೆಲ್ಲ ಆಗುತ್ತದಾದರೂ ಇತ್ತೀಚಗೆ ಈ ಪದ ಅರ್ಥ ತುಸು ಅಪಭ್ರಂಶವಾಗುತ್ತಿದೆ. ಗರ್ಲ್ ಫ್ರೆಂಡ್ ಎಂದರೆ ಗೆಳತಿಗಿಂತ ಹೆಚ್ಚು, ಪ್ರೇಯಸಿಗಿಂತ ಕಡಮೆ ಎನ್ನುವ ಭಾವದಲ್ಲಿ ಈ ಪದವನ್ನು ಬಳಸಲಾಗುತ್ತಿದೆ. ಈ ಮೊದಲು ಇಂಗ್ಲಿಷಿನಲ್ಲಿಇ ಪದ ಬಳಕೆಯಲ್ಲಿರಲಿಲ್ವೇನೋ..! ಫ್ರೆಂಡ್ ಅಂಬ ಪದವನ್ನಷ್ಟೇ ಗೆಳೆಯ ಅಥವಾ ಗೆಳತಿಯನ್ನು ಸೂಚಿಸುವುದಕ್ಕಾಗಿ ಬಳಸಲಾಗುತ್ತಿದ್ದಿರಬೇಕು. ಆದರೆ ತೀರಾ ಇತ್ತೀಚಗೆ ಗರ್ಲ್ ಫ್ರೆಂಡ್ ಮತ್ತು ಬಾಯ್ ಫ್ರೆಂಡ್ ಪದಗಳನ್ನು ಬಳಸಲಾಗುತ್ತಿದೆ. ಆದರೆ ನೆನಪಿರಲಿ, ಈ ಪದಗಳ ಬಳಕೆಗೆ ಕೆಲವು ಅಪವಾದಗಳಿವೆ. ನೀವು ಪುರುಷರಾಗಿದ್ದಲ್ಲಿ ನೀವು ನಿಮ್ಮ ಗೆಳೆಯನನ್ನು ಬಾಯ್ ಫ್ರೆಂಡ್ ಎಂದು ಕರೆಯುವಂತಿಲ್ಲ..ಆದರೆ ನಿಮ್ಮ ಗೆಳತಿಯನ್ನು ಗರ್ಲ್ ಫ್ರೆಂಡ್ ಎಂದು ಕರೆಯಬಹುದು. ಒಮದು ವೇಳೆ ನೀವು ಮಹಿಳೆಯಾಗಿದ್ದಲ್ಲಿ ನೀವು ನಿಮ್ಮ ಗೆಳೆತಿಯನ್ನು ಗರ್ಲ್ ಪ್ರೆಂಡ್ ಎಂದು ಕರೆಯುವಂತಿಲ್ಲ..ಆದರೆ ನೀವು ನಿಮ್ಮಗೆಳೆಯನನ್ನು ಬಾಯ್ ಫ್ರೆಂಡ್ ಎಂದು ಕರೆಯಬಹುದು. ಈಗ ವಿಷಯಕ್ಕೆ ಬರೋಣ.. ಹುಡುಗರದು ಹುಡುಗು ಬುದ್ದಿ:- ಹುಡುಗರದು ಎಲ್ಲ ಹುಡುಗರದ್ದು ಒಮದು ವೀಕ್ ನೆಸ್ ಏನೆಂದರೆ, ಕೌಮಾರ್ಯ ದಾಟುತ್ತಿದ್ದಂತೆಯೆ ಅವರು ಕೆಲವು ವಿಷಯಗಳಿಗೆ ...