ಕವಿತೆ

ಕಾನನದ ನಡುವೆ ಸುಳಿವ
ಮೌನವೇ ಈ
ಕವಿತೆ
ಚಂದ್ರನ ಬಿಂಬದಿ ಸುರಿವ
ಬೆಳದಿಂಗಳೇ ಈ ಕವಿತೆ

ಮರುಭೂಮಿಯ
ಒಳಗೆ
ನೀರ ನೆಲೆಯಂತೆ
ಅರಿಯದ
ದ್ವೀಪದಲಿ
ಸಿಕ್ಕ ಜೀವಸೆಲೆಯಂತೆ

ಕಾರುಣ್ಯದಾ ಕಡಲೊಳಗೆ
ಅದ್ದಿ
ತೆಗೆದಿರಿಸಿ
ಆತ್ಮಕ್ಕೆ ಸವರಿ ಕಾಪಿಟ್ಟ
ಸವಿಗವಿತೆ

ಪದಗಳಿಲ್ಲದಿದ್ದರೂ ತಾ
ಭಾವಸೆಲೆಯೊಡೆದು
ಒಲವ ಕಂಪ
ಬೀರೋ
ಹೂವು ಈ ಕವಿತೆ
--- ರನ್ನ ಕಂದ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....