ಕವಿತೆ
ಕಾನನದ ನಡುವೆ ಸುಳಿವ
ಮೌನವೇ ಈ
ಕವಿತೆ
ಚಂದ್ರನ ಬಿಂಬದಿ ಸುರಿವ
ಬೆಳದಿಂಗಳೇ ಈ ಕವಿತೆ
ಮರುಭೂಮಿಯ
ಒಳಗೆ
ನೀರ ನೆಲೆಯಂತೆ
ಅರಿಯದ
ದ್ವೀಪದಲಿ
ಸಿಕ್ಕ ಜೀವಸೆಲೆಯಂತೆ
ಕಾರುಣ್ಯದಾ ಕಡಲೊಳಗೆ
ಅದ್ದಿ
ತೆಗೆದಿರಿಸಿ
ಆತ್ಮಕ್ಕೆ ಸವರಿ ಕಾಪಿಟ್ಟ
ಸವಿಗವಿತೆ
ಪದಗಳಿಲ್ಲದಿದ್ದರೂ ತಾ
ಭಾವಸೆಲೆಯೊಡೆದು
ಒಲವ ಕಂಪ
ಬೀರೋ
ಹೂವು ಈ ಕವಿತೆ
--- ರನ್ನ ಕಂದ
ಮೌನವೇ ಈ
ಕವಿತೆ
ಚಂದ್ರನ ಬಿಂಬದಿ ಸುರಿವ
ಬೆಳದಿಂಗಳೇ ಈ ಕವಿತೆ
ಮರುಭೂಮಿಯ
ಒಳಗೆ
ನೀರ ನೆಲೆಯಂತೆ
ಅರಿಯದ
ದ್ವೀಪದಲಿ
ಸಿಕ್ಕ ಜೀವಸೆಲೆಯಂತೆ
ಕಾರುಣ್ಯದಾ ಕಡಲೊಳಗೆ
ಅದ್ದಿ
ತೆಗೆದಿರಿಸಿ
ಆತ್ಮಕ್ಕೆ ಸವರಿ ಕಾಪಿಟ್ಟ
ಸವಿಗವಿತೆ
ಪದಗಳಿಲ್ಲದಿದ್ದರೂ ತಾ
ಭಾವಸೆಲೆಯೊಡೆದು
ಒಲವ ಕಂಪ
ಬೀರೋ
ಹೂವು ಈ ಕವಿತೆ
--- ರನ್ನ ಕಂದ
Comments