ಹಸು,ಹುಲಿ ಮತ್ತು ಸತ್ಯ


ಖಡ್ಗದ ಮೇಲಿನ ರಕ್ತ ದ ಕಲೆ
ಕೇವಲ ಒಣಗಿ ಹೋದ ಸೇಡಲ್ಲ.
ಹುರಿ ಮೀಸೆಯ ಎಲ್ಲ ತಿರುವು
ಶೂರತನದ ಕುರುಹಲ್ಲ..

ಹುಲಿಯ ಸಾವಿಗೂ ಮುನ್ನ
ಗೋವು ಸಾಯಬಯಸಿತ್ತು..
ಹುಲಿಯ ಹಸಿವ ನೀಗಲು
ಕರುಳ ಹರಿದಿತ್ತು..
ಸತ್ಯ ನಂಬುಗೆಯ 
ಹುಲಿಗೆ ಕಲಿಸಿತ್ತು..
ಆ ಹುಲಿ ಕಲಿತುಕೊಂಡರೂ
ಉಳಿದ ಹುಲಿಗಳಿಗೆ 
ಅರ್ಥವಾಗಲಿಲ್ಲ..

ಕತೆಗೂ ಮೊದಲು ಸತ್ತ ಹಸುಗಳೆಷ್ಟೋ..?
ಕೊಂದ ಹುಲಿಗಳೆಷ್ಟೋ
ತಿಂದ ದಿನಗಳೆಷ್ಟೋ..
ಸುಮ್ಮನೇ ಕತೆಯಾಗುವುದಿಲ್ಲ
ಬರೆದುದೆಲ್ಲ
ಕವಿತೆಯಾಗುವುದಿಲ್ಲ..

ಎಲ್ಲ ಗೋಡೆಗಳಿಗೂ
ಬೆರಣಿ ತಟ್ಡಿದರೆ
ಅಂದ ತೋರುವುದಿಲ್ಲ.

--- ರನ್ನ ಕಂದ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....