ಯಾವುದೋ ದಾರಿಯ ಬೇಲಿಯ ಹೂಗಳು ನಗುತ್ತವೆ ಪರಿಮಳದ ಅಹಮ್ಮಿನಲಿ ಸುಂದರತೆಯ ಬಿಮ್ಮಿನಲಿ ಸದಾ ಖುಷಿಯ ಧೇನಿಸುತ್ತವೆ ಒಂದೊಂದು ಹೂವಿಗೆ ಒಂದು ಚೆಂದವಿದೆ ಸೌಗಂಧವಿದೆ ಒಂದೊಂದು ದೇವರ ಮುಡಿಗೆ ಬೇಷರತ್ ಮೀಸಲಿವೆ ನಮ್ಮಂತೆ ಬದುಕು ಹಸನು ಈ ಹೂಗಳದ್ದು ಮುಡಿಯೇರಿ ನಗುತ್ತವೆ ಮಾಲೆಯ ಸೇರಿ ಹಲವು ಹೂಗುಚ್ಛದಲಿ ಅವಿತು ಕೆಲವು ಒಂದೊಂದು ಜಾಗೆಗೆ ಒಂದೊಂದು ಅರ್ಥ ನೀಡುತ್ತವೆ ಈ ಹೂಗಳು ಅಂತೆಯೇ ನಮ್ಮ ಮನದ ಹೂಗಳು ಸದಾ ಅರಳಬೇಕು ಒಲವ ಸೌಗಂಧ ಸೂಸುತ ಮುಡಿಯೇರಬೇಕು ಮುಳ್ಳುಗಳ ನಡುವೆ ಮೃದುತನವ ತೋರಬೇಕು ಈ ಹೂಗಳಂತೆ.. --- ರನ್ನ ಕಂದ
ಅ ದೊಂದು ದಿನ ಬಾಟನಿ ಪ್ರ್ಯಾಕ್ಟೀಕಲ್ಸ್ ಮುಗಿಸಿಕೊಂಡು ಮರಳುವ ಹೊತ್ತಿಗೆ ಸರಿಯಾಗಿ ಐದು ಗಂಟೆಯಾಗಿತ್ತು. ಬಸ್ ಸ್ಟಾಪ್ ಗೆ ಹೋಗಬೆಕೆನ್ನುವುಷ್ಟರಲ್ಲಿ ‘ಧೋ’ ಎಂದು ಮಳೆ ಸುರಿಯಲಾರಂಭಿಸಿತು. ಬಳಿಯಿದ್ದ ಮುಚ್ಚಿದ್ದ ಕ್ಯಾಸೆಟ್ ಅಂಗಡಿ ಮುಗ್ಗಟ್ಟಿನ ಕೆಳಗೆ ನೆಲೆ ಕಂಡುಕೊಂಡೆ.ಆ ಸುಂದರ ಮಳೆಯನ್ನು ನಾನು ಈ ಹಿಂದೆ ಎಲ್ಲೂ ನೋಡಿರಲಿಲ್ಲ.ಆ ಮಳೆಹನಿಗಳ ಸೌಂದರ್ಯವನ್ನು ನನ್ನ ಕಣ್ಣುಗಳಲ್ಲಿ ತುಂಬಿಸಿಕೊಳ್ಳುತ್ತಿರುವಾಗಲೇ ಒಬ್ಬ ಸರಿಸುಮಾರು ಇಪ್ಪತ್ತರ ಸನಿಹದ ಹುಡುಗಿಯೊಬ್ಬಳು ನಾನಿದ್ದ ಅಂಗಡಿ ಮುಗ್ಗಟ್ಟಿಗೆ ಬಂದು ನೆಲೆ ಕಂಡಳು.ಗಮನಿಸಲಾಗಿ ಅವಳು ನನ್ನ ಗೆಳೆತಿ ಉಷಾ. ಈ ಹಿಂದೆ ಅವಳಿಗೆ ಒಂದು ಪ್ರೇಮ ಪತ್ರ ಬರೆದು ಅವಾಂತರ ಸೃಷ್ಟಿಸಿದ್ದೆ.ಇಷ್ಟು ದಿನಗಳ ಬಳಿಕ ಸಹಜಕ್ಕಿಂತ ತುಸು ಸಮೀಪದಲ್ಲೆ ನಿಂತಳು. ನಾನು ಈ ಹಿಂದೆ ಹುಡುಗಿ ಬಳಿ ಇಷ್ಟು ಸನಿಹ ನಿಂತವನಲ್ಲ.ಆವತ್ತಿನ ಘಟನೆಯನ್ನು ನೆನಸಿಕೊಂಡು ನಾನು ಸುಮ್ಮನಾದೆ. ನನಗ್ಯಾಕೋ ತುಸು ನಾಚಿಕೆಯಾಯಿತು. ಮತ್ತೆ ಗಂಡಸಿಗೆಂತ ನಾಚಿಕೆ ಅಂತ ಹಾಗೇ ನಿಂತೆ. ಅವಳೂ ಭಾಗಶಃ ತೊಯ್ದು ಹೋಗಿದ್ದಳು. ತನ್ನ ಮೈಯನ್ನೆಲ್ಲಾ ಲಘುವಾಗಿ ನೀವುತ್ತಿದ್ದಳು.ನಾನು ಅವಳ ಮುಖ ನೋಡುವ ಪ್ರಯತ್ನ ಮಾಡಿದೆ. ತೀಡಿ ತಿದ್ದಿದಂಥ ಕರಿಹುಬ್ಬು. ಮೀನಿನಂಥ ನಯನಗಳು, ನುಣುಪಾದ ಕೆನ್ನೆ,ನೀಳ ನಾಸಿಕ, ಹೂವಿನಂಥ ತುಟಿಗಳು, ನೀಳ ಕಾಯದ ದೇಹ, ಹಾಲಿನಂಥ ಬಣ್ಣ..ಹಿಂದೆಂದೂ ಆಗದಂಥ ರೋಮಾಂಚನವಾಯಿತು ನನಗೆ. ಛೇ..! ಇದೆಲ್ಲ ಆಕರ್...
ಬೆಂಕಿ
ನಗುತ್ತಿದೆ
ದಲಿತರ ಕಪ್ಪು ಚರ್ಮವ ನೋಡಿ
ತನ್ನ ಧಗೆಯೊಳಗೆ ಅವಿತ
ಕಪ್ಪಿನೊಂದಿಗೆ ಹೋಲಿಸಿಕೊಂಡು
ಬೆಂಕಿ ನಗುತ್ತಿದೆ
ಬಿಳಿಯ ಹೂವುಗಳು
ಮಾತ್ರ ಅರಳುತ್ತಿವೆ ದಿನವಿಡೀ
ಬದುಕಿ
ಅರಳಿಸದೇ ಉಳಿದವುಗಳ
ನೆರಳಿಗಷ್ಟೇ ನೂಕಿ
ಸತ್ತ ಸಾವಿಗೂ ಸುದ್ದಿಯಿಲ್ಲದಂತೆ
ಬೆಂಕಿ ಸದ್ದಡಗಿಸುತಿದೆ
ತನ್ನ ತಾನರಿಯದ ಕಪ್ಪು
ಬೆಪ್ಪಾಗುತಲಿದೆ
ಬೆಂಕಿಯ ಅಪ್ಪಿ ಮುಪ್ಪಾಗುತಿದೆ
ಮೈ ಬೆವರು ರಕ್ತ
ತಿಂದು ತೇಗುವುದೆಲ್ಲ ಒಂದೇ ಇರಲು
ಎಲ್ಲಿಯದು ಈ ದಲಿತ ಪಟ್ಟ
ಕಟ್ಟಬೇಕಿದೆ ಈ ಬಗೆಯ ಶೋಷಣೆಗೆ ಚಟ್ಟ
ಬೆಂಕಿಯ ನಗುವಳಿಸಿ
ಸುಟ್ಟ ಗಾಯದನುಭವವ ಮಾಡಿಸಬೇಕಿದೆ
ಈ ಹಾಳು ಬೆಂಕಿಗೆ.,
--- ರನ್ನ ಕಂದ
ನವೆಂಬರ್ 26, 2008 ಭಾರತದ ಇತಿಹಾಸದಲ್ಲಿ ಕಪ್ಪು ಅಕ್ಷರಗಳಲ್ಲಿ ಬರೆದಿಡಬೇಕಾದಂಥ ದಿನ. ಮುಂಬಯಿ ಮಹಾನಗರದಲ್ಲಿನ ಹೋಡೆಲ್ಲುಗಳ ಮೇಲಿನ ಉಗ್ರರ ಅಟ್ಟಹಾಸವನ್ನು ಕಂಡರಿತ ದಿನ. ನೂರಾ ಐದು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದ ಸ್ಮಾರಕವೊಂದು ಮೈ ಸುಟ್ಟುಕೊಂಡ ದಿನ. ಭಾರತಿಯರ ಮೃದು ಧೋರಣೆಗೆ ಕೊಡಲಿ ಪೆಟ್ಟು ಬಿದ್ದ ದಿನ.ಹೀಗೆ ಬೆಳೆಯುತ್ತಾ ಹೋಗುತ್ತದೆ ದಿನ ದಿನಗಳ ಪಟ್ಟಿ. 2004ರಲ್ಲಿ ನಾವು ಮುಂಬಯಿಗೆ ಪ್ರವಾಸಕ್ಕೆ ಹೋದಾಗ ಗೇಟ್ ವೇ ಆಫ್ ಇಂಡಿಯಾದ ಎದುರು ನಿಂತು ಚಿತ್ತಾರ್ಷವಾಗಿ ಕಾಣುತ್ತಿದ್ದ ತಾಜ್ ಹೋಟೆಲನ್ನು ಕಣ್ಣಾರೆ ಸವಿದು ವಾಹ್..! ತಾಜ್ ಎಂದು ಕಣ್ತುಣಬಿಕೊಂಡು ಬಂದಿದ್ದೆವು. ಮುಂದೆ ನೌಕರಿ ಸಿಕ್ಕಾಗ ಒಮ್ಮೆಯಾದರೂ ಈ ಪಂಚತಾರಾ ಹೋಟೆಲ್ಲಿಗೆ ಗೆಳತಿಯೊಡನೆ ಹೋಗಿ ಬಂದರೆ ಸಾಕು ಎಂದು ನನ್ನೊಳಗೆ ಯೋಜನೆ ಹಾಕಿಕೊಂಡಿದ್ದೆ. ತಾಜ್ ಹೊತ್ತಿ ಉರುಯುತ್ತಿರುವಾಗ ಎಲ್ಲಿಲ್ಲದ ನೋವು, ತಳಮಳ ಜೊತೆಗೆ ನನ್ನಾಸೆಯೂ ಭಾಗಶಃ ಹೊತ್ತಿ ಉರಿದು ಹೋಗುತ್ತಿತ್ತು. ರೋಷ ಉಕ್ಕುತ್ತಿತ್ತು. ನಮ್ಮ ಮನೆಗೆ ಯಾರೋ ಬೆಂಕಿ ಇಟ್ಟಂತೆ ಭಾಸವಾಗುತ್ತಿತ್ತು. ನವೆಂಬರ್ 27, 2008 ರಂದು ಶಾಲೆಗೆ ಹೋಗಲು ಮನಸ್ಸೇ ಇರಲಿಲ್ಲ. ಆದರೂ ಬೇರೆ ವಿಧಿ ಇರಲಿಲ್ಲ. ಮನಸ್ಸಿಲ್ಲದೆ ಪಾಠ ಮಾಡುವುದೆಂತು? ಒಬ್ಬ ವಿದ್ಯಾರ್ಥಿ ಕೇಳಿದ : "ಸರ್, ಮುಂಬಯಿಯಲ್ಲಿ ಭಯೋತ್ಪಾದಕರು ತಾಜ್ ಹೋಟೆಲ್ ಮೇಲೆ ಬಾಂಬ್ ದಾಳಿ ನಡೆಸಿದ್ದಾರಂತೆ? ನಿನ್ನೆ ಟಿವಿಯಲ್ಲಿ ನೋಡಿದ್ವಿ. ಸರ್ ಇವತ್ತು ಬೆಳಿ...
ಯಾರದೋ ಪುಣ್ಯ ಆದೆವು ಧನ್ಯ ತಿರುಗಾಡಿ ತಿನ್ನುತ್ತ ಬತ್ತಲೆಯ ಮೈಯತ್ತ ಅರಿವ ಪಡೆಯುತ್ತ ಸಾಗಿದೆವು ಶತಶತಮಾನಗಳಿಂದಿತ್ತ… ನೆಲದ ಮೇಲೆ ಕಂಡೆದ್ದೆಲ್ಲ ಬೇಡಿ ರಚ್ಚೆ ಹಿಡಿದು ಉಚ್ಚೆ ಹೊಯ್ದು ಆಕಾಶದಲೂ ಸಹ ತಡಕಾಡಿ ಮತ್ತೆ ಹೇತ ನೆಲದ ಎದೆಯೊಳಗಿಳಿದು ಯಂತ್ರಕೈಗಳಿಂದ ಬಗೆದು ಮನೆ ಮಠ, ಗುಡಿ ಗುಂಡಾರ, ಚರ್ಚು ಮಸಜೀದುಗಳ ಕಟ್ಟಿ ಅಲ್ಲಲ್ಲಿ ಆತ್ಮ ತೊಳೆಯುತ್ತ… ಉಸಿರ ಊಡುವ ಉಸಿರ್ಗಾಳಿಗೆ ಹೇಸಿಗೆಯ ಮೆತ್ತಿ ಮೊಗೆದು ಕುಡಿವ ಅಪ್ಪುವಿನ ಕರುಳಿಗೆಲ್ಲ ಮಲಿನತೆಯ ಸವರಿ ಮಣ್ಣ ಮಾರಿ ಬೆಲೆ ಕಟ್ಟಿದ ನಮ್ಮ ಈ ಅರಿವಿಗೆ ಬಾರದಾಯಿತು ಮಣ್ಣು ನಮಗೆ ಬೆಲೆ ಕಟ್ಟದೆಂದು ನನ್ನ ಬಯಸುವೆ ನೀ ನಿನ್ನನೂ ನಾ ಬಯಸದೇ ಇರನೆಂದಿತು ಮಣ್ಣು.. ಜೀವಕೆ ತಂಪಿಟ್ಟು ನೆರಳಿಟ್ಟು ಪೊರೆದ ಹಸಿರಿಗೆ ಕಸಿರಂತೆ ಕಂಡು ಮೈಯ ಸೀಳುವಾಗ ರಕ್ತ ಮಾಂಸವಿರಲಿಲ್ಲ.. ಕಾಂಕ್ರೀಟಿನ ಕಾಡು ಗೊಂದಲದ ಗೂಡು ನಮ್ಮೊಳಗೆ ನಮ್ಮದೇ ದೌಡು.. ಹೊಟ್ಟೆ ಕೆಡವಿದ ಬಾಣಂತಿಯಂತೆ ಭೂತಾಯಮ್ಮನ ಪಾಡು.. ಮೆರೆದಿವಿಲ್ಲಿ ಮೆದುಳೊಂದನೆ ಮೆರೆಸಿ, ಮೈಯಿಂದ ಮನಸನಷ್ಟೇ ಹೊರಗಿರಿಸಿ, ನೊಂದ ಪ್ರಕೃತಿಯು ತಾಳದಂತಾಗಿ ಪಂಚಭೂತಗಳೆಲ್ಲ ಒಂದಾಗಿ, ಹೆಣೆದ ಸಣ್ಣ ಸ್ಥಿತಿಯನು ಎದುರಿಸದಾದೆವು.. ಬಗೆದಷ್ಟು ಸುಲಭವಲ್ಲ ಬದುಕು ಉಳಿಸಿಕೊಳ್ಳುವ ಬಗೆ ಇದರ ಮುನಿಸಿನ ಎದುರು ಸಲ್ಲ.. ಪ್ರಕೃತಿಗಿಂತ ಅಧಿಕರು ಮತ್ತಾರೂ ಇಲ್ಲ.. — ರನ್ನ ಕಂದ
Comments