ನೀನಾಗಲಿ, ನಿನ್ನ ನೆನಪುಗಳಾಗಲಿ ಬರಕೂಡದೆಂದು ನನ್ನೆದೆಗೆ ಬೀಗ ಜಡೆದುಕೊಂಡು ಕೀಲಿ ಕೈ ಕಳೆದುಕೊಂಡೆ ಸಂಬಂಧಗಳನ್ನೆಲ್ಲಾ ತೊಳೆದುಕೊಂಡೆ ಮನಸಿನೊಳಗೆ ನಿನ್ನ ಕನಸುಗಳು ತೂರದಂತೆ ಬೇಲಿ ಹಾಕಿಕೊಂಡೆ ಕಣ್ಣು ರೆಪ್ಪೆಗಳನ್ನು ಹಿಂಡಿ ನಿನ್ನ ಜಾರಿಕೊಂಡೆ ಇವೆಲ್ಲವನ್ನು ಮೀರಿ ನೀ ನನ್ನೊಳ ಬಂದೆ ಹೇಗೆ ಸಾದ್ಯ ಎಂದಾಗ ಪ್ರೀತಿ ಎಂದೆ ಪ್ರೀತಿ ಇಷ್ಟು ಶಕ್ತವೇ…? — ಸಚಿನ್ ಕುಮಾರ ಬಿ.ಹಿರೇಮಠ
ಹಾಯ್ ಗೆಳೆಯರೆ, ನಿಮ್ಮ ಒಳಗಿನ ಲೇಖಕ ಲೇಖಕಿಯನ್ನು ಬರೆಯಲು ಕೂಡಿಸಿ. ನಿಮ್ಮ ಬರಹಗಳನ್ನು ನನ್ನ ಿಮೇಲ್ ವಿಳಾಸಕ್ಕೆ ಕಳುಹಿಸಿ. ನನ್ನೊಂದಿಗೆ ಸಾಥ್ ನೀಡಿ.ಸದ್ಯ ಮುಧೋಳದ ನನ್ನ ತಮ್ಮ ನವೀನ್ ಕುಮಾರ ಬಿ.ಹಿರೇಮಠ, ಗೆಳತಿ ರಾಜೆಶ್ವರಿ ಬಿ.ಕೆ ಹಾಗೂ ಗೆಳೆಯ ಸಂಗಮೇಶ ಯಾಳವಾರ ಈ ಸಲ ನಿಮ್ಮ ಮುಂದಿದ್ದಾರೆ.. -ಸಚಿನ್ ಕುಮಾರ ಬಿ.ಹಿರೇಮಠ, sachin_b1985@yahoo.co.in
ಚೆಲುವೆ ಮತ್ತೇ ಬಂತು ಚಳಿಗಾಲ ಮೈ ಕೊರೆವ ಚಳಿ ನನಗೆ ಅಪ್ಪಿತಪ್ಪಿಯೂ ನೆನಪಾಗುತ್ತಿಲ್ಲ ಬೆಚ್ಚಗಿನ ಹೊದಿಕೆ ಆದರೆ ಬೆಂಬಿಡದೆ ಕಾಡುತಿವೆ ನಿನ್ನಪ್ಪುಗೆಯಲಿ ಕಳೆದ ಬೆಚ್ಚನೆಯ ಗತರಾತ್ರಿಗಳ ನೆನಕೆ.. ----ಮಹಾಂತೇಶ ದೊಡ್ಡಮನಿ
ಹೆಜ್ಜೆ ಇಟ್ಟಿದ್ದೇನೆ ಇಡೀ ಬದುಕಿಗೆ ಶ್ರಮದ ಹೆಗಲಲಿ ಆಶೋತ್ತರಗಳ ಹೊತ್ತು ಹಾದಿಯ ಬದಿಗೆ ಮುಗುಳ್ನಗುವ ಹೂ ಹೇಳ ಹೊರಟಿದೆ ಹೊಸ ವಿಚಾರವನೊಂದು ದಾರಿಯಲ್ಲಿನ ಕಲ್ಲುಗಳೂ ಸಹ ಕೋರುತಿವೆ ಅವಕಾಶವನೊಂದು ಮೆಟ್ಟಿದರೂ ಮೇಲೇಳುವ ಬಗೆಯ ಕಲಿಸುತಿದೆ ಗರಿಕೆ ಹುಲ್ಲು ಅಪ್ಪಳಿಸುವ ತೊರೆಗೆ ಎದೆ ನೀಡುವುದ ಕಲಿಸುತಿದೆ ತೀರದ ಕಲ್ಲು ನೋವಿನಲೂ ನಗುವುದನು ತೋರುತಿದೆ ಫಲ ಹೊತ್ತ ಮರವು ನಗುವಿನಲೂ ನರಳುತಿವೆ ನೋವುಗಳ ಅಪಸ್ವರವು ಹೆಜ್ಜೆ ಇಟ್ಟಿದ್ದೇನೆ ಅರ್ಧ ದಾರಿಗೆ ಅರ್ಥವಾಗುವವರೆಗೂ ನಡೆಯಲೇಬೇಕು ಎಲ್ಲವನೂ ಹೊತ್ತು. -- *ರನ್ನ ಕಂದ*
ನಿನ್ನ ನಗುವಿನೊಳಗೇನು ಅಷ್ಟು ಶಕ್ತಿ? ಅವಿತಂತೆ ಭಕ್ತನಲಿ ದೇವರ ಭಕ್ತಿ.. ಬೆಳದಿಂಗಳಾಗುತಿದೆ ತಾ ಸುಡುವ ಬಿಸಿಲು ಭೋರ್ಗೆರೆದು ಹರಿಯುತಿದೆ ಈ ಪ್ರೇಮದಾ ಹೊನಲು ---ಸಚಿನ್ ಕುಮಾರ ಬಿ.ಹಿರೇಮಠ
Comments