ತಂಪು ಬಿಸಿಲು

ಅದೊಂದು ಸುಂದರ ಮಧ್ಯಾಹ್ನ. ನಾವು ತಲುಪಬೇಕಾದ ೂರು 100 ಕಿ.ಮೀ ಆಚೆ ಇತ್ತು. ಬೆಂಬಿಡದ ದಗೆಯಲ್ಲಿ ಮೈ ಕರಗಿ ಹೋಗುತ್ತಿತ್ತು. ಬಸ್ಸಿನಲ್ಲಿ ಅಲುಗಾಡಲನುವಾಗದಷ್ಟು ರಶ್ಶು. ಆ ನೂಕು ನುಗ್ಗಲಿನೊಮದಿಗೆ ಬಸ್ಸು ಚಲಿಸತೊಡಗಿತ್ತು. ಮಗ್ಗಲಿನ ೊಂದು ಸೀಟು ಖಾಲಿ ಆಗುತ್ತಿದ್ದಂತೆಯೇ ಹೊರಗಿನಿಂದ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಕರ್ಚಿಫನ್ನು ಕಿಟಕಿಯಿಂದ  ಎಸೆದು ತಮ್ಮ ಮಗಳಿಗೆ ಸೀಟು ಕಾದಿರಿಸಿದರು. ನಮ್ಮಲ್ಲಿ ಬಸ್ಸುಗಳಲ್ಲಿ, ರೈಲುಗಳಲ್ಲಿ, ಸೀಟು ಕಾಯ್ದಿರಿಸುವ ರಿತಿ ಇದು. ಆ ಸೀಟು ಯಾರದ್ದೋ ಎಂದು ನಾವು ನಿರೀಕ್ಷಿಸುತ್ತಿರುವಾಗ ಇಪ್ಪತ್ತರ ಸನಿಹದ ಬಾಲೆಯೊಬ್ಬಳು ಾ ಸೀಟಿಗೆ ಬಂದು ಕುಳಿತಳು. ಅಪ್ರತಿಮ ಸುಂದರಿ ಅಲ್ಲದ್ದಿದ್ದರೂ ಮಾಸದ ಚೆಲುವು.
                                     ತುಸು ಕಿಲೋ ಮೀಟರುಗಳನ್ನು ನುಂಗಿ ಬಸ್ಸು ಚಲಿಸುತ್ತಿರುವಾಗ ಾಕೆ ಮ್ಯಾಗಝೀನ್ ನ್ನು ಬಿಡಿಸಿ ಓದತೊಡಗಿದಳು. ನಾವು ಮೂರು ಜನ ಗೆಳೆಯರು, ಸಹಜವಾಗಿ ನಮ್ಮ ದೃಷ್ಟಿ ಅವಳತ್ತ ಹರಿಯಿತು. ಪದೇ ಪದೆ ಅವಳನ್ನೇ ನೋಡುವಷ್ಟು ಚೆಂದವಾಗಿದ್ದಳು ಆಕೆ. ಮನಸ್ಸೊಂದು ಮರ್ಕಟ. ಅ ಕ್ಷಣಗಳಲ್ಲೆಲ್ಲ ನಮ್ಮ ನಮ್ಮಲ್ಲಿ ಸರಿದಾಡಿದ ಭಾವನೆಗಳು, ಆಲೋಚನೆಗಳು ನಿಜಕ್ಕೂ ಹೇಲತೀರದಂತಹವು. ಒಮ್ಮೆ ನಂದಾ ದೀಪದಂತೆ ತೋರುತ್ತಾಳೆ, ಇನ್ನೊಮ್ಮೆ ಮಗುವಂತೆ ತೋರುತ್ತಾಳೆ. ಒಮ್ಮೆ ಹೃದಯ ಕದಿಯುವಂತೆ ಭಾಸವಾಗುತ್ತಾಳೆ. ಮಗದೊಮ್ಮೆ ಮೇಣದ ಬೊಂಬೆಯಂತೆ ತೋರುತ್ತಾಳೆ. ಏತನ್ಮಧ್ಯೆ ನಾವು ಓದುತ್ತಿದ್ದ ಪತ್ರಿಕೆಯೊಂದನ್ನು ಅವಳು ಎರವಲು ಕೇಳಿದಳು. ಪ್ರತಿಯಾಗಿ  ನಾವು ಅವಳು ಓದುತ್ತಿದ್ದ ಮ್ಯಾಗಝೀನ ಕೇಳಿದೆವು. ಆದರೆ ಓದಲು ಪ್ರಯತ್ನಿಸಿದ್ದು ಮಾತ್ರ ಅವಳ ಅಂತರಂಗ.
                                      ಪ್ರಯಾಣಿಕರ ದುರಾದೃಷ್ಟಕ್ಕೆ ಬಸ್ಸು ಮುನಿಸಿಕೊಂಡು ನಿಂತಿತು. ಎಲ್ಲರೂ ಬೇರೆ ಬೇರೆ ಬಸ್ಸಿಗೆ ಹೊರಡಲು ಕೆಳಗಿಳಿಯಬೇಕಾಯಿತು. ನಮ್ಮ ಅದೃಷ್ಟಕ್ಕೆ ಒಂದು ಎದುರಾಯಿತಾದರೂ ಸೀಟಿರಲಿಲ್ಲ. ನಾವೆಲ್ಲ ನಿಂತೇ ಪ್ರಯಾಣಿಸಬೇಕಾಯಿತು. ನಮ್ಮ ಪಕ್ಕದಲ್ಲಿ ಅವ:ಳು ನಿಮತಳು. ಅಲ್ಲಿ ಶುರುವಾಯಿತು ಮಾತಿನ ವರಸೆ. ಆ ವರಸೆಗೆ ನನ್ನ ಗೆಳೆಯನೊಬ್ಬ ಧೈರ್ಯಮಾಡಿ ನೀರು ಕೊಡ್ತೀರಾ ಅಂತ ಕೇಳ್ದ. ಅವಳು ಇಲ್ಲವೆನ್ನದೆ ನೀರು ಕೊಟ್ಟಳು. ನಮಗೆ ಕಿಂದರಿ ಜೋಗಿಯ ಚಿತ್ರದ ‘ಗಂಗೆ ಬಾರೆ…. ತುಂಗೆ ಬಾರೆ…’ ಹಾಡು ನೆನಪಾಯಿತು. ನಮ್ಮ ಗೆಳೆಯನ ಥ್ಯಾಂಕ್ಸಿಗೆ ಅವಳು ಮುನಿಸಿಕೊಂಡು “ಥ್ಯಾಂಕ್ಸ್  ಹೇಳ್ಬೇಡಿ. ನೀರು ಜೀವ ಜಲ. ನೀ ರು ಕೊಟ್ಟಿದ್ದಕ್ಕೆ ಪ್ರತಿಯಾಗಿ ನಾನು ಥ್ಯಾಂಕ್ಸ್ ಪಡೆದರೆ ಮುಂದಿನ ಜನ್ಮದಲ್ಲಿ ಹಲ್ಲಿಯಾಗಿ ಹುಟ್ಟಬೇಕಾಗುತ್ತೆ. ನಿಮ್ಮ ಥ್ಯಾಂಕ್ಸನ್ನು ವಾಪಸ್ ತಕ್ಕೊಳ್ಳಿ “ಎಂದಳು. ನಾವು ಆ ವರಸೆಗೆ ಬೆರಗಾಗಿ ನಮ್ಮ ಥ್ಯಾಂಕ್ಸ್ ವಾಪಸ್ ಪಡೆದೆವು. ಬಳಿಕ ನಮ್ಮ ಪರಿಚಯ ಶುರುವಾಯಿತು. ಮೊದಲು ಆಕೆಯೇ ತನ್ನ ಪರಿಚಯ ಮಾಡಿಕೊಂಡಳು. ಅವಳ ಹೆಸರು ‘ರಮ್ಯ. ಬಿ’ ಎಂದು. ಗಂಗಾವತಿಯವಳು. ಹಿಂದೂಸ್ತಾನಿ ಸಂಗೀತಾಭ್ಯಾಸದಲ್ಲಿ ಪರಿಣಿತಳು. ಪಿಯುಸಿ ಮುಗಿಸಿದ್ದಳು. ಒಳ್ಲೆಯ ಮನೆತನ. ಗಂಗಾವತಿಯಲ್ಲಿ ಅನೇಕ ಸಂಗೀತ ಕಚೇರಿಗಳನ್ನು ನೀಡಿದ ಖ್ಯಾತಿ ಅವಳದು. ಅವಳ ಮಾತುಗಳು ಅಷ್ಟೆ ಮಧುರವಾಗಿದ್ದವು, ಇನ್ನು ಅವಳು ಹಾಡಿದಳೆಂದರೆ ಗಾನಲೋಕ ಸೃಷ್ಟಿಯಾಗುವುದರಲ್ಲಿ ಸಂದೆಹವೆ ಇಲ್ಲ. ನಾವು ನಮ್ಮ ಪರಿಚಯ ಮಾಡಿಕೊಂಡೆವು. ನಮ್ಮ ಶಿಕ್ಷಕ ವೃತ್ತಿ, ನಮ್ಮ ಕರ್ಮಭೂಮಿ. ನಮ್ಮ ಜನ್ಮಭೂಮಿ ಇವೆಲ್ಲವನ್ನು ಹೇಳಿಕೊಂಡೆವು. ನಮ್ಮಲ್ಲಿನ ಭಯ, ವಿಹಲ್ವತೆ ಎಲ್ಲವೂ ಮಾಯವಾಗಿ ಒಂದು ಸುಂದರ ಸ್ನೇಹ ನಮಗೆ ತಿಳಿಯದಂತೆ ಬೆಸೆದುಕೊಂಡುಬಿಟ್ಟಿತು. ಆ ಆಯಾಸವೆಲ್ಲ  ಾಕೆಯೊಂದಿಗಿನ ಸಂಭಾಷಣೆಯಲ್ಲಿ ಕರಗಿ ಹೋದಂತಾಯಿತು. ನಮ್ಮ ದುರಾದೃಷ್ಟಕ್ಕೆ ಆ ಬಸ್ಸು ಮತ್ತೇ ಕೈ ಕೊಟ್ಟಿತು.
       ನಮಗೆ ಸಮಯವಿರಲಿಲ್ಲವಾದದುದರಿಂದ ನಾವು ಅವಳಿಗಾಗಿ ಕಾಯದೇ ಸಿಂಧನೂರಿಗೆ ಹಹೋಗುವ ಬಸ್ಸನ್ನೇರಿ ಸಿಂಧನೂರಿಗೆ ಬಂದೆವು. ಅವಳು ‘ಬೇಡ’ವೆಂದರೂ ಕೇಳದೆ.. ಸಿಂಧನೂರಿಗೆ ಬಂದಾಕ್ಷಣ ಅವಳನ್ನು ಮತ್ತೇ ನೋಡಲೇ ಬೇಕೆಂದು ಅನ್ನಿಸತೊಡಗಿತು. ಅವಳಿಗಾಗಿ ಬಸ್ ಸ್ಟ್ಯಾಂಡಿನಲ್ಲಿ ಹತ್ತು ಹದಿನಾರತು ನಿಮಿಷ ಕಾದೆವಾದೆರೂ ಅವಳ ಸುಳಿವೇ ಸಿಗಲಿಲ್ಲ. ನಾವು ಉಪಾಹಾರ ಮುಗಿಸಿ ಕೊನೆಯ ಪ್ರಯತ್ನವೆಂಬಂತೆ ಅಲ್ಲಿರುವ ಬಸ್ಉಗಳನ್ನೆಲ್ಲಾ ತಡಕಾಡುವಾಗ ಸಿಕ್ಕಳು.ಅದೆ ನಗು, ಅದೆ ಸೌಂದರ್ಯ,ಅದೇ  ಹವಣಿಕೆ ಕಂಡಿತು.. ಒಂದು ಸುಂದರ ನಗುವಿನೊಂದಿಗೆ ಅವಳನ್ನು ಬೀಳ್ಕೊಟ್ಟೆವು.       
                                          —ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....