ಪ್ರಶಸ್ತಿ ವಾಪಸಾತಿ ಪ್ರಹಸನ

ಅಂದು ಪಡೆದೆವು ಪದವಿ ಗೌರವ
ಸಾರಸ್ವತದ ಪ್ರಶಸ್ತಿಯ ಇಂದು
ಉರಿಯಿತು ಮನದಿ ರೌರವ ಮರಳಿಸುತಲಿ
ಪ್ರಶಸ್ತಿಯ ರೈತನೊಡಲಿನ ಬರಿಯ
ಬಾನಲ ನಮ್ಮ ಕಣ್ಣಿಗೆ ಕಾಣದು
ಚೈತ್ರಹೆಣ್ಣಿನ ಜೀವಹರಣವು ನೆಮ್ಮಿ
ಎಂದು ತೋರದು ಮಡಿದು ಹೋದ ದಕ್ಷ
ರಕ್ಷಕ ನಮ್ಮ ನೆನಪಿಗೆ ಬಾರನು
ಗೋವುಹಂದಿಯ ತಿನ್ನಲೆಸಗುತ
ಮರೆವೆವಿನ್ನು ನಮ್ಮನು ನೆರೆಯ ಮನೆಯ
ದುಃಖ ನೋಡುತ ನಿಂತ ನಮ್ಮಯ
ಪಾಡನು ಹಾಡತೊಡಗಿವೆ ಒಂದೇ ಗೂಡಿನ
ಒಂದೇ ಚೊಲ್ಲಿನ ಹಾಡನು ಒಂದು
ಬೀಳಲು ಎಲ್ಲ ಬಿದ್ದವು ಎಂತ ಸುಂದರ
ನಾಟಕ ಎಲ್ಲ ಮನದಿ ಲೆಕ್ಕ ತಪ್ಪಿದ
ಪೂರ್ಣವಲ್ಲದ ಕೋಷ್ಠಕ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....