ಪ್ರಶಸ್ತಿ ವಾಪಸಾತಿ ಮತ್ತು ಸಹಿಷ್ಣುತೆ

ಪ್ರಶಸ್ತಿ ವ್ಯಕ್ತಿತ್ವಕ್ಕೆ ದೊರೆತಿರುವಂತಹದ್ದು. ಅದನ್ನು ವಾಪಸು ಪಡೆದರೆ ಅಥವಾ
ವಾಪಸಾತಿ ಮಾಡಿದರೆ ಅಂತಹ ವ್ಯಕ್ತಿತ್ವ ನಂಮದಲ್ಲ ಎಂದು ಒಪ್ಪಿಕೊಂಡಂತಾಗುತ್ತದೆ.
ಸಾಹಿತಿಗಳು ಪ್ರಶಸ್ತಿ ವಾಪಸಾತಿಯನ್ನು ಪ್ರತಿಭಟನೆಯ ವಿಧ ಎಂದು ತಿಳಿದು ವಾಪಸಾತಿ
ಮಾಡುತ್ತಿರುವುದು ಒಂದು ಬಗೆಯ ಸಮೂಹ ಸನ್ನಿ.

ಯಾವುದೇ ಸರ್ಕಾರ ಏಕ ವ್ಯಕ್ತಿಯಲ್ಲ. ಎಲ್ಲವೂ ಸರ್ಕಾರದಿಂದಲೇ ಸಂಭವಿಸುವುದಿಲ್ಲ.
ನಂಮದೇ ಸರ್ಕಾರ ಇದೆ ಎಂದು ಯಾರೂ ದುಷ್ಕೃತ್ಯ ಎಸಗುವುದಿಲ್ಲ. ಅದು ವ್ಯಕ್ತಿನಿಷ್ಠವೇ
ಹೊರತು ಸರ್ಕಾರ ಪ್ರೇರಿತವಲ್ಲ. ಪ್ರಶಸ್ತಿಗಳನ್ನು ವಾಪಸು ಮಾಡಿದ ಮಾತ್ರಕ್ಕೆ ಎಲ್ಲವೂ
ಸರಿಯಾಗಿಬಿಡುತ್ತದೆ ಎಂಬುದು ತಪ್ಪು. ಸಾಹಿತಿಗಳಲ್ಲಿ ಸಾಕಷ್ಟು ವಿಚಾರಗಳಿವೆ. ಬರೆಹಗಳ
ಮೂಲಕ ಜನರಲ್ಲಿ ಸಾಮರಸ್ಯ ಬಿತ್ತುವಂತ ಕೆಲಸ ಆಗಬೇಕೇ ಹೊರತು ಸುದ್ದಿಯಾಗುವುದರಿಂದ
ಸಹಿಷ್ಣುತೆ ಸಾಧ್ಯವಿಲ್ಲ.

--- ಸಚಿನ್ ಕುಮಾರ ಬಿ. ಹಿರೇಮಠ,ರನ್ನ ಮುಧೋಳ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....